ತಿರುವನಂತಪುರಂ: ಏಲತ್ತೂರ್ ರೈಲ್ವೇ ದಾಳಿ ಪ್ರಕರಣದಲ್ಲಿ ಉಗ್ರರ ನಂಟು ಇರುವುದನ್ನು ಕೇಂದ್ರೀಯ ಸಂಸ್ಥೆಗಳು ಖಚಿತಪಡಿಸಿವೆ.
ಇದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಕೇಂದ್ರ ಗುಪ್ತಚರ ದಳ ದೃಢಪಡಿಸಿದೆ. ಶಾರುಖ್ ಸೈಫಿ ಕೇರಳಕ್ಕೆ ತಾನಾಗಿಯೇ ಬಂದಿಲ್ಲ ಎಂದು ಕೇಂದ್ರೀಯ ಸಂಸ್ಥೆಗಳು ಪತ್ತೆ ಹಚ್ಚಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ರೈಲಿನ ಬೋಗಿಯನ್ನು ಸಂಪೂರ್ಣ ಸುಟ್ಟು ಹಾಕುವ ಗುರಿ ಹೊಂದಿದ್ದು, ಈ ಮೂಲಕ ದೊಡ್ಡ ದಾಳಿಗೆ ಯೋಜನೆ ರೂಪಿಸಿದ್ದನ್ನು ವಿವಿಧ ಕೇಂದ್ರೀಯ ಸಂಸ್ಥೆಗಳು ಪತ್ತೆ ಹಚ್ಚಿವೆ. ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಪ್ರಕರಣದ ಹೆಚ್ಚಿನ ತನಿಖೆಯನ್ನು ನಡೆಸಿದ್ದು, ಹೆಚ್ಚಿನ ಮಾಹಿತಿಯನ್ನು ಕಂಡುಕೊಂಡಿದೆ. ಈ ಮಾಹಿತಿ ಆಧರಿಸಿ ಎನ್ ಐಎ ಪ್ರಾಥಮಿಕ ತನಿಖೆಯನ್ನೂ ನಡೆಸಿತ್ತು. ಎರಡು ಏಜೆನ್ಸಿಗಳು ನಡೆಸಿದ ವಿಸ್ತೃತ ತನಿಖೆಯಿಂದ ಭಯೋತ್ಪಾದಕರ ನಂಟು ಬೆಳಕಿಗೆ ಬಂದಿದೆ.
ಆತನನ್ನು ಕೇರಳಕ್ಕೆ ಕರೆತರಲು ಖಚಿತ ಯೋಜನೆ ರೂಪಿಸಲಾಗಿತ್ತು. ಸಾಕಷ್ಟು ಸಹಾಯವನ್ನು ಪಡೆದಿದ್ದ ಎಂದು ತನಿಖಾ ತಂಡವು ಕಂಡುಹಿಡಿದಿದೆ. ಬೆಂಕಿ ಹಚ್ಚುವ ಹಿಂದೆ ಯೋಜಿತ ಚಟುವಟಿಕೆಗಳಿದ್ದು, ಇದಕ್ಕಾಗಿ ದೊಡ್ಡ ತಂಡವೇ ಕೆಲಸ ಮಾಡಿದೆ ಎಂದು ಕೇಂದ್ರ ಸಂಸ್ಥೆ ಸ್ಪಷ್ಟಪಡಿಸಿದೆ. ಶಾರುಖ್ ಸೈಫಿಗೆ ಪರಿಕಲ್ಪನೆಯ ಸ್ಫೂರ್ತಿಯನ್ನು ನೀಡುವ ಹಿಂದೆ ಉತ್ತಮ ತಂಡವಿದೆ. ಕೃತ್ಯಕ್ಕಾಗಿ ಕೇರಳವನ್ನು ಆಯ್ಕೆಮಾಡಲು ಮತ್ತು ಅಲಪ್ಪುಳ-ಕಣ್ಣೂರು ಎಕ್ಸಿಕ್ಯುಟಿವ್ ಎಕ್ಸ್ಪ್ರೆಸ್ ಅನ್ನು ಆಯ್ಕೆ ಮಾಡಲು ಸಾಕಷ್ಟು ಯೋಜನೆಗಳನ್ನು ಒಳಗೊಂಡಿತ್ತು ಎನ್ನಲಾಗಿದೆ.
ರೈಲಿನ ಒಂದು ಬೋಗಿಯನ್ನು ಸಂಪೂರ್ಣವಾಗಿ ಸುಡುವ ಯೋಜನೆಯಾಗಿತ್ತು. ಈ ಉದ್ದೇಶಕ್ಕಾಗಿ ಶಾರುಖ್ ಬಳಿ ಮೂರು ಬಾಟಲ್ ಪೆಟ್ರೋಲ್ ಸೇರಿದಂತೆ ಎಲ್ಲಾ ಉಪಕರಣಗಳು ಇದ್ದವು ಎಂದು ವರದಿಯಾಗಿದೆ. ಆದರೆ ಯೋಜನೆ ಎಲ್ಲೋ ನನೆಗುದಿಗೆ ಬಿದ್ದಿದೆ. ಯೋಜಿಸಿದಂತೆ ನಿಖರವಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಬೃಹತ್ ದಾಳಿ ನಡೆಸುವ ಅನುಭವದ ಕೊರತೆಯೇ ಯೋಜನೆ ಜಾರಿಯಾಗದಿರಲು ಕಾರಣ ಎಂದು ಕೇಂದ್ರೀಯ ಸಂಸ್ಥೆಗಳು ಪತ್ತೆ ಹಚ್ಚಿವೆ. ಶಾರುಖ್ ಗೆ ಕೃತ್ಯವನ್ನು ಸ್ಪಷ್ಟವಾಗಿ ನಿರ್ವಹಿಸಲು ಪ್ರೇರೇಪಿಸಲಾಗಿತ್ತು ಎಂದು ವರದಿಯಾಗಿದೆ.
ಪ್ರಕರಣದಲ್ಲಿ ಕೇರಳ ಪೆÇಲೀಸರಿಂದ ದೊಡ್ಡ ವೈಫಲ್ಯವಾಗಿದೆ ಎಂಬುದು ಕೇಂದ್ರೀಯ ಸಂಸ್ಥೆಗಳು ಬೊಟ್ಟುಮಾಡಿದೆ. ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲು ಕೇರಳ ಪೆÇಲೀಸರಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಭಯೋತ್ಪಾದಕ ನಂಟು ಇರುವುದು ಸಾಬೀತಾದರೆ ಮಾತ್ರ ಪ್ರಕರಣವನ್ನು ಎನ್ ಐಎಗೆ ಹಸ್ತಾಂತರಿಸಲಾಗುವುದು ಎಂದು ಕೇರಳ ಪೆÇಲೀಸರ ನಿರ್ಧಾರ ಎಂಬ ಸುಳಿವು ಸಿಕ್ಕಿದೆ. ಆದರೆ ತಮಗೆ ಬಂದಿರುವ ಮಾಹಿತಿಯನ್ನು ಕೇಂದ್ರ ಸಚಿವಾಲಯಕ್ಕೆ ನೀಡುವುದು ಕೇಂದ್ರ ಸಂಸ್ಥೆಗಳ ನಿರ್ಧಾರವಾಗಿದೆ.
ಏಲತ್ತೂರು ರೈಲಿಗೆ ಬೆಂಕಿಹಚ್ಚಿದ ಘಟನೆ: ಭಯೋತ್ಪಾದಕ ಸಂಪರ್ಕಗಳನ್ನು ದೃಢೀಕರಿಸಿದ ಕೇಂದ್ರ ಏಜೆನ್ಸಿಗಳು
0
ಏಪ್ರಿಲ್ 08, 2023


