ಎರ್ನಾಕುಳಂ: ಚಿನ್ನ ಕಳ್ಳಸಾಗಣೆ ಪ್ರಕರಣದ ರೂವಾರಿ ಕೆ.ಟಿ.ರಮೀಸ್ ನನ್ನು ಬಂಧಿಸಲಾಗಿದೆ.
ಆತನ ಬಂಧನವನ್ನು ಇಡಿ ದಾಖಲಿಸಿಕೊಂಡಿದೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ಚಿನ್ನ ಕಳ್ಳಸಾಗಣೆ ಮಾಡುವ ಮಾಸ್ಟರ್ ಮೈಂಡ್ ಈತನಾಗಿದ್ದ.
ಚಿನ್ನ ಕಳ್ಳಸಾಗಣೆ ನಂತರ ಕಪ್ಪುಹಣಕ್ಕೆ ಸಂಬಂಧಿಸಿದ ಪ್ರಕರಣವನ್ನು ಇಡಿ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಮೊದಲು ಶಿವಶಂಕರ್ ಮತ್ತು ಸ್ವಪ್ನಾ ಅವರನ್ನು ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ರಮೀಸ್ನನ್ನು ಕಸ್ಟಮ್ಸ್ ಮತ್ತು ಎನ್ಐಎ ವಿಚಾರಣೆಗೊಳಪಡಿಸಿದೆ. ರಮೀಜ್ ಇಡಿ ಬಂಧಿಸಿದ ಐದನೇ ಆರೋಪಿ.
ರಾಜತಾಂತ್ರಿಕ ಮಾರ್ಗದ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡುವ ಆಲೋಚನೆ ರಮೀಸ್ ಅವರದ್ದಾಗಿತ್ತು. ಫೈಸಲ್ ಫರೀದ್ ಜೊತೆ ದುಬೈನಿಂದ ಚಿನ್ನವನ್ನು ಸಾಗಿಸಿದವನು ರಮೀಜ್ ಎಂಬುದು ಪತ್ತೆಯಾಗಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣ: ಕಪ್ಪುಹಣ ವ್ಯವಹಾರದ ಮಾಸ್ಟರ್ ಮೈಂಡ್ ಬಂಧನ
0
April 07, 2023