HEALTH TIPS

ಹುಸಿಯಾದ ಸರ್ಕಾರದ ಭರವಸೆ: ಎರಡು ತಿಂಗಳ ಕಲ್ಯಾಣ ಪಿಂಚಣಿ ವಿಳಂಬ


               ತಿರುವನಂತಪುರಂ: ವಿಳಂಬವಾಗಿದ್ದ ಎರಡು ತಿಂಗಳ ಸಾಮಾಜಿಕ ಭದ್ರತಾ ಪಿಂಚಣಿ ಪಾವತಿಸುವ ರಾಜ್ಯ ಸರ್ಕಾರದ ಭರವಸೆ ಹುಸಿಯಾಗಿದೆ.
         ಹಣ ಮಂಜೂರಾದರೂ ನಿನ್ನೆಯೂ ಖಜಾನೆಗಳಿಗೆ ಹಣ ಬಂದಿಲ್ಲ. ಇಂದು ಬ್ಯಾಂಕ್ ರಜೆ ಇರುವುದರಿಂದ ವಿಷು ನಂತರವೇ ಫಲಾನುಭವಿಗಳಿಗೆ ಪಿಂಚಣಿ ಸಿಗಲಿದೆ.
            ಎರಡು ತಿಂಗಳ ಪಿಂಚಣಿಗೆ ಒಬ್ಬರಿಗೆ 3200 ರೂ. ಪಿಂಚಣಿಯನ್ನು ಉಚಿತವಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಹಣಕಾಸು ಸಚಿವ ಬಾಲಗೋಪಾಲ್ ಹೇಳಿದ್ದಾರೆ. ಆದರೆ ಏಪ್ರಿಲ್ ಮೊದಲ ವಾರವಾದರೂ ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡಿಲ್ಲ.ಎರಡು ದಿನಗಳ ಹಿಂದೆ ಹಣ ಬಿಡುಗಡೆಯಾಗಿತ್ತು.
            ಖಜಾನೆಗಳಲ್ಲಿ ಹಣದ ಕೊರತೆಯಿಂದಾಗಿ ಕೇರಳ ಬ್ಯಾಂಕ್‍ಗೆ ಹಣ ನೀಡಿಲ್ಲ. ಕೇರಳ ಬ್ಯಾಂಕ್ ಸಹಕಾರಿ ಬ್ಯಾಂಕ್‍ಗಳ ಮೂಲಕ ಹಣವನ್ನು ಮನೆಗಳಿಗೆ ತಲುಪಿಸುತ್ತದೆ. ಸಿಪಿಎಂ ಆಡಳಿತ ಮಂಡಳಿ ಹೊಂದಿರುವ ಕೆಲವು ಸಹಕಾರಿ ಬ್ಯಾಂಕ್‍ಗಳು ಫಲಾನುಭವಿಗಳಿಗೆ ಸ್ವಂತವಾಗಿ ಹಣ ಬಿಡುಗಡೆ ಮಾಡಿವೆ.
           ವೃದ್ಧರು ಹಾಗೂ ಅಂಗವಿಕಲರು ಪಿಂಚಣಿ ಸಿಗದೆ ಪರದಾಡುತ್ತಿದ್ದಾರೆ. ಸರಕಾರದ ಮಾತು ನಂಬಿ ವಿಷು ಹಬ್ಬಕ್ಕೆ ಪಿಂಚಣಿಗಾಗಿ ಕಾದು ಕುಳಿತವರು ಕಂಗಾಲಾಗಿರುವರು. ಎμÉ್ಟೀ ಬಿಕ್ಕಟ್ಟು ಬಂದರೂ ಪಿಂಚಣಿ ನಿಲ್ಲುವುದಿಲ್ಲ ಎಂಬುದು ಸರ್ಕಾರದ ಹೇಳಿಕೆಯಾಗಿತ್ತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries