ನಿತ್ಯ ಪುಷ್ಪಎಂಬ ಅದ್ಭುತ ಸಸ್ಯ: ಮಧುಮೇಹಿಗಳಿಗೆ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಮಧುಮೇಹ ಒಳ್ಳೆಯದು ಎಂದು ಅಧ್ಯಯನಗಳು ಕೂಡ ಹೇಳಿವೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಹಾಗೂ ಕ್ಯಾನ್ಸರ್ನಾಶಕ ಗುಣಗಳಿಂದಾಗಿ ಇದೊಂದು ಅದ್ಭುತವಾದ ಸಸ್ಯವಾಗಿದೆ. ಈ ನಿತ್ಯಪುಷ್ಪಾವನ್ನು ಅನೇಕ ಬಗೆಯ ಕ್ಯಾನ್ಸರ್ಗುಣಪಡಿಸಲು ಬಳಸಲಾಗುವುದು, ಅಲ್ಲದೆ ಮಧುಮೇಹ, ಅತ್ಯಧಿಕ ರಕ್ತದೊತ್ತಡ ಈ ಬಗೆಯ ಸಮಸ್ಯೆ ತಡೆಗಟ್ಟಲು ಕೂಡ ಪರಿಣಾಮಕಾರಿಯಾಗಿದೆ. ಆದರೆ ನೀವು ಈ ನಿತ್ಯಪುಷ್ಪಾವನ್ನು ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಬಳಸಬೇಕು. ಇದನ್ನು ಹೇಗೆ ಬಳಸಬೇಕೆಂದು ನೀವು ಆಯುರ್ವೇದ ವೈದ್ಯರ ಸಲಹೆ ಪಡೆಯಬಹುದು.
ನಿತ್ಯ ಪುಷ್ಪ ಟೈಪ್ 1 ಹಾಗೂ ಟೈಪ್ 2 ಮಧುಮೇಹಿಗಳಲ್ಲಿ ಯಾರಿಗೆ ಒಳ್ಳೆಯದು?
*
ಟೈಪ್ 1 ಎಂದರೆ ಇನ್ಸುಲಿನ್ ಕೊರತೆಯಿಂದಾಗಿ ಉಂಟಾಗುವ ಸಮಸ್ಯೆಯಾಗಿದೆ. ಆದ್ದರಿಂದ
ನಿತ್ಯಪುಷ್ಪಾ ಇಂಥವರಿಗೆ ಪರಿಣಾಮ ಬೀರುವುದಿಲ್ಲ. ಆದರೆ ಟೈಪ್ 2ಮಧುಮೇಹಿಗಳು ಅಥವಾ
ಮಧುಮೇಹ ಬಾರ್ಡರ್ ಲೈನ್ನಲ್ಲಿರುವವರು ಆಯುರ್ವೇದ ವೈದ್ಯರ ಸಲಹೆ ಪಡೆದು ಬಳಸಬಹುದು.
* ನಿತ್ಯಪುಷ್ಪಾ ಬಳಸುವುದರಿಂದ ವ್ಯಕ್ತಿಯ ಕಿಡ್ನಿ, ಹೃದಯ, ಲಿವರ್ ಅಥವಾ ದೇಹದ ಇತರ ಭಾಗಗಳಿಗೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ.
ನಿತ್ಯ ಪುಷ್ಪವನ್ನು ಮಧುಮೇಹಿಗಳು ಹೇಗೆ ಬಳಸಬೇಕು?
ನಿತ್ಯಪುಷ್ಪಾದ ಹೂ ಹಾಗೂ ಎಲೆಗಳನ್ನು ಮಧುಮೇಹ ನಿಯಂತ್ರಣಕ್ಕೆ ಔಷಧಿಯಾಗಿ ಬಳಸಬಹುದು.
* ಇದರ ಎಲೆಯ ರಸ ಅಥವಾ ಇದರ ಬೇರು, ಕಾಂಡ ಇವುಗಳನ್ನು ಮಧುಮೇಹಿಗಳಿಗೆ ನೀಡಬಹುದು.
* ಮಧುಮೇಹಿಗಳು ದಿನಾ ಇದರ 4-5 ಎಲೆಗಳನ್ನು ತಿಂದರೆ ಮಧುಮೇಹ ನಿಯಂತ್ರಣದಲ್ಲಿಡಬಹುದು.
* ನೀವು ಇಡೀ ಗಿಡವನ್ನು ಒಣಗಿಸಿ ಪುಡಿ ಮಾಡಿ ಅದನ್ನು ದಿನ ನಿತ್ಯ ಒಂದು ಚಮಚ ಬಳಸಬಹುದು.
* 6-7 ಎಲೆಗಳನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣದಲ್ಲಿಡಬಹುದು.
ಯಾರಿಗೆ ಒಳ್ಳೆಯದಲ್ಲ?
* ಅಲ್ಸರ್, ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಒಳ್ಳೆಯದಲಲ್.
* ಗರ್ಭಿಣಿಯರು ಬಳಸಬೇಡಿ
* ಎದೆಹಾಲುಣಿಸುವ ತಾಯಂದಿರು ಬಳಸಬೇಡಿ.