HEALTH TIPS

ಶಾರುಖ್ ನ ಭಯೋತ್ಪಾದಕ ಸಂಬಂಧವನ್ನು ದೃಢಪಡಿಸಲಾಗಿಲ್ಲ: ಅಪರಾಧ ಹಿನ್ನೆಲೆಗಾಗಿ ಪರಿಶೀಲಿಸಲಾಗುವುದು: ಡಿಜಿಪಿ ಸ್ಪಷ್ಟನೆ


                    ತಿರುವನಂತಪುರಂ: ಎಲತ್ತೂರಿನಲ್ಲಿ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‍ಪ್ರೆಸ್‍ನಲ್ಲಿ ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಮೂವರ ಸಾವಿಗೆ ಕಾರಣನಾದ ಪ್ರಕರಣದಲ್ಲಿ ಆರೋಪಿ ಶಾರುಖ್ ಸೈಫಿಗೆ ಭಯೋತ್ಪಾದಕ ಸಂಪರ್ಕವಿದೆಯೇ ಎಂಬುದನ್ನು ಖಚಿತಪಡಿಸಲು ಡಿಜಿಪಿಗೆ ಸಾಧ್ಯವಾಗಿಲ್ಲ.
               ದಾಳಿಯಲ್ಲಿ ಎಷ್ಟು ಜನರ ಕೈವಾಡವಿದೆ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಡಿಜಿಪಿ ಅನಿಲಕಾಂತ್ ಪ್ರತಿಕ್ರಿಯಿಸಿದರು.
            ದಾಳಿಗೆ ಶಾರುಖ್‍ಗೆ ಯಾರಾದರೂ ಸಹಾಯ ಮಾಡಿದ್ದಾರೆಯೇ ಎಂಬುದು ನಮಗೆ ತಿಳಿಯಬೇಕಿದೆ. ಸದ್ಯ ಆರೋಪಿಯ ಅಪರಾಧ ಹಿನ್ನೆಲೆಯನ್ನು ಪರಿಶೀಲಿಸಲಾಗುವುದು. ಶಾರುಖ್ ನನ್ನು ವಿವರವಾಗಿ ಪ್ರಶ್ನಿಸಬೇಕಾಗಿದೆ. ದಾಳಿಯ ಸಂಪೂರ್ಣ ಚಿತ್ರಣ ಸಿಕ್ಕ ನಂತರವμÉ್ಟೀ ಯುಎಪಿಎ ಹೇರುವುದು ಸೇರಿದಂತೆ ವಿಷಯಗಳನ್ನು ಹೇಳಲು ಸಾಧ್ಯ ಎಂದು ಡಿಜಿಪಿ ಹೇಳಿದ್ದಾರೆ.
              ವೈದ್ಯಕೀಯ ಪರೀಕ್ಷೆ ಬಳಿಕ ವಿಚಾರಣೆ ಆರಂಭವಾಗಲಿದೆ. ವಿಚಾರಣೆ ಮುಗಿದ ನಂತರವμÉ್ಟೀ ತಪೆÇ್ಪಪ್ಪಿಕೊಂಡನೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬಹುದು. ಪ್ರಕರಣದ ಪ್ರತಿಯೊಂದು ಭಾಗವನ್ನು ಪರಿಶೀಲಿಸಲಾಗುವುದು. ಕ್ರಾಸ್ ಎಕ್ಸಾಮಿನೇಷನ್ ನಲ್ಲಿ ಆರೋಪಿ ಏನು ಹೇಳಿದರೂ ಪರಿಶೀಲಿಸಬೇಕು. ಆತನ ಯೂಟ್ಯೂಬ್ ಚಾನೆಲ್ ಅನ್ನು ಪರಿಶೀಲಿಸಲಾಗುತ್ತಿದೆ.
           ಮಹಾರಾಷ್ಟ್ರ ಎಟಿಎಸ್, ಕೇರಳದ ವಿಶೇಷ ತನಿಖಾ ತಂಡ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಸಂಯುಕ್ತ ಕಾರ್ಯಾಚರಣೆಯಲ್ಲಿ ರತ್ನಗಿರಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಪುನರುಚ್ಚರಿಸಿದರು. ಸ್ಪಷ್ಟ ಸುಳಿವುಗಳ ನಂತರ ಸರಿಯಾದ ಸಮಯದಲ್ಲಿ ಏಜೆನ್ಸಿಗಳ ಸಂಘಟಿತ ಕ್ರಮದಿಂದ ಆರೋಪಿಯನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries