ಕಾಸರಗೋಡು: ಪುರೋಗಮನ ಕಲಾ ಸಾಹಿತ್ಯ ಸಂಘ ಕಾಸರಗೋಡು ವತಿಯಿಂದ ಕವಿಗೋಷ್ಠಿ ಹಾಗೂ ಪಿ.ಆರ್ ಸದಾನಂದನ್ ಅವರು ರಚಿಸಿದ 'ಸಾಲು ಮರದ ತಿಮ್ಮಕ್ಕ'ಕೃತಿ ಅನಾವರಣ ಕಾರ್ಯಕ್ರಮ ಏ. 25ರಂದು ಸಂಜೆ 3.30ಕ್ಕೆ ಕಾಸರಗೋಡು ಪಬ್ಲಿಕ್ ಸರ್ವೆಂಟ್ ಸಭಾಂಗಣದಲ್ಲಿ ಜರುಗಲಿದೆ.
ದಿವಾಕರನ್ ವಿಷ್ಣುಮಂಗಲಂ ಪುಸ್ತಕ ಬಿಡುಗಡೆಗೊಳಿಸುವರು. ನಾರಾಯಣನ್ ಪೆರಿಯ, ಪಿ.ದಾಮೋದರನ್, ಪದ್ಮನಬನ್ ಬ್ಲಾತ್ತೂರ್, ಡ. ವಿನೋದ್ಕುಮಾರ್ ಪೆರುಂಬಳ ಪುಸ್ತಕ ಸ್ವೀಕರಿಸುವರು. ಬಾಲಕೃಷ್ಣನ್ ಚೆರ್ಕಳ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದ ಅಂಗವಾಗಿ ಕವಿಗೋಷ್ಠಿ ನಡೆಯಲಿರುವುದು.
ಪುರೋಗಮನ ಕಲಾ ಸಾಹಿತ್ಯ ಸಂಘ ವತಿಯಿಂದ'ಸಾಲು ಮರದ ತಿಮ್ಮಕ್ಕ'ಕೃತಿ ಬಿಡುಗಡೆ
0
April 18, 2023