ಕಾಸರಗೋಡು: ಬಿಎಂಎಸ್ ಮುಖಂಡ, ವಕೀಲ ಸುಹಾಸ್ ಸಂಸ್ಮರಣಾ ಸಮಾರಂಭ ಕಾಸರಗೋಡು ಬಿಎಂಎಸ್ ಕಚೇರಿ ವಠಾರದಲ್ಲಿ ಜರುಗಿತು. ಬಿಎಂಎಸ್ ಜಿಲ್ಲಾ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ವಿ ಬಾಲಕೃಷ್ಣನ್ ಸಮಾರಂಭ ಉದ್ಘಾಟಿಸಿದರು.
ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ವಕೀಲ ಮುರಳೀಧರನ್, ಶ್ರೀನಿವಾಸನ್, ಜಿಲ್ಲಾ ಸಮಿತಿ ಜತೆಕಾರ್ಯದರ್ಶಿಗಳಾದ ಹರೀಶ್ ಕುದ್ರೆಪ್ಪಾಡಿ, ದಿನೇಶ್ ಬಂಬ್ರಾಣ, ಎ. ಸತ್ಯನಾಥನ್, ಅನಿಲ್ ಬಿ ನಾಯರ್, ಸಿಂಧು ಮನೋರಾಜ್, ವಿಶ್ವನಾಥ ಶೆಟ್ಟಿ, ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿಎಂಎಸ್ ಮುಖಂಡ, ವಕೀಲ ಸುಹಾಸ್ ಸಂಸ್ಮರಣಾ ಸಮಾರಂಭ
0
April 18, 2023