ಕಾಸರಗೋಡು: ಮೀನುಗಾರರಿಗೆ ಪುನರ್ವಸತಿ ಯೋಜನೆಯಾದ 'ಪುನರ್ಗೇಹಂ' ಯೋಜನೆಯನ್ವಯ ವಸತಿ ಸಂಕೀರ್ಣದ ನಿರ್ಮಾಣವನ್ನು ಮೀನುಗಾರಿಕೆ, ಸಂಸ್ಕøತಿ ಮತ್ತು ಯುವಜನ ವ್ಯವಹಾರಗಳ ಸಚಿವ ಸಜಿ ಚೆರಿಯನ್ ಏಪ್ರಿಲ್ 3 ರಂದು ಮಧ್ಯಾಹ್ನ 3.30ಕ್ಕೆ ನಾರಾಯಣಮಂಗಲ ಎಲ್. ಪಿ ಶಾಲೆಯ ಸಭಾಂಗಣದಲ್ಲಿ ಜರುಗಲಿದೆ. ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜಮೋಹನ್ ಉನ್ನಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಸರಗೋಡು ಬ್ಲಾಖ್ ಪಂಚಾಯಿತಿ ಅಧ್ಯಕ್ಷೆ ಸಿಎ ಸೈಮಾ, ಮಂಜೇಶ್ವರಂ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸಮೀಮಾ ಟೀಚರ್ ಪಾಲ್ಗೊಳ್ಳುವರು.
ರಾಜ್ಯ ಸರ್ಕಾರವು ಕೇರಳ ಕರಾವಳಿಯುದ್ದಕ್ಕೂ 50ಮೀ ವ್ಯಾಪ್ತಿಯಲ್ಲಿ ಹಾಗೂ ಅತಿಯಾದ ಸಮುದ್ರ ಕೊರೆತ ಅನುಭವಿಸುತ್ತಿರುವ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 18000 ಮೀನುಗಾರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಪುನರ್ಗೇಹಂ ಯೋಜನೆ ಜಾರಿಗೊಳಿಸುತ್ತಿದೆ. ಯೋಜನೆಯನ್ವಯ ಈಗಾಗಲೇ 2406 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ.
ಮೀನುಗಾರರ ಪುನರ್ವಸತಿಗೆ ಪುನರ್ಗೆಮ್ ಯೋಜನೆ-ಇಂದು ಸಚಿವ ಸಜಿ ಚೆರಿಯನ್ ಉದ್ಘಾಟನೆ
0
April 02, 2023