ಕಾಸರಗೋಡು: ಪ್ರಾಯಪೂರ್ತಿಯಾಗದವರಿಗೆ ದ್ವಿಚಕ್ರವಾಹನ ಚಲಾಯಿಸಲು ನೀಡಿದ ಹೆತ್ತವರಿಗೆ ಪೊಲೀಸ್ ಇಲಾಖೆ ದಂಡ ಹೇರುವ ಮೂಲಕ ಚುರುಕು ಮುಟ್ಟಿಸಿದೆ. ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜುವೆನೈಲ್ ರೈಡ್ ಹೆಸರಲ್ಲಿ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದು, ಬಾಲಕರ ಬೈಕ್ ರೈಡ್ಗೆ ಕಡಿವಾಣ ಹಾಕಲು ಮುಂದಾಗಿದೆ.
ವಿದ್ಯಾನಗರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 17ರ ಹರೆಯದ ಬಾಲಕ ಬೈಕ್ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಈತನ ತಂದೆ ಅದ್ರುಕುಳಿ ನಿವಾಸಿ ಶೀನ ನಾಯ್ಕ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ 17ರ ಹರೆಯದ ಬಾಲಕ ಬೈಕ್ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಈತನ ತಂದೆ ಕೋಟಿಕುಳಂ ತಿರುವಕ್ಕೋಳಿ ನಿವಾಸಿ ಅಬ್ದುಲ್ ಖಾದರ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲಿನೀ ರೀತಿಯ ಮೂರು ಹಾಗೂ ಹೊಸದುರ್ಗ ಸಬ್ಡಿವಿಶನ್ ವ್ಯಾಪ್ತಿಯಲ್ಲಿ 12ಪ್ರಕರಣ ದಾಖಲಾಗಿದೆ. ಪ್ರಾಯಪೂರ್ತಿಯಾಗದವರಿಗೆ ವಾಹನ ಚಲಾಯಿಸಲು ನೀಡಿದಲ್ಲಿ ಅವರ ಹೆತ್ತವರ ವಿರುದ್ಧ ಕೇಸು ದಾಖಲಿಸಲಾಗುತ್ತಿದ್ದು, ಗರಿಷ್ಠ 25ಸಾವಿರ ರೂ. ವರೆಗೆ ದಂಡ ವಿಧಿಸಲಾಗುತ್ತಿದೆ.
ಜುವೆನೈಲ್ ರೈಡ್: ಅಪ್ರಾಪ್ತರ ಬೈಕ್ ಸವಾರಿ ವಿರುದ್ಧ ಪೊಲೀಸ್ ಕಾರ್ಯಾಚರಣೆ ಚುರುಕು
0
April 10, 2023
Tags