ಕೋಝಿಕ್ಕೋಡ್: ಎಲತ್ತೂರ್ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿ ಶಾರುಖ್ ಸೈಫಿ ತಪೆÇ್ಪಪ್ಪಿಕೊಂಡಿದ್ದಾನೆ ಎಂದು ಎಡಿಜಿಪಿ ಎಂಆರ್ ಅಜಿತ್ ಕುಮಾರ್ ಹೇಳಿದ್ದಾರೆ.
ಲಭಿಸಿರುವ ಬ್ಯಾಗ್ ನನ್ನದೇ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದೂ ಎಡಿಜಿಪಿ ತಿಳಿಸಿದ್ದಾರೆ. ಪ್ರಕರಣವು ಆರಂಭಿಕ ಹಂತದಲ್ಲಿದ್ದು, ಕೇಂದ್ರ ಏಜೆನ್ಸಿಗಳು ಮೊದಲಿನಿಂದಲೂ ತನಿಖೆಯ ಪ್ರಗತಿಯನ್ನು ಮೌಲ್ಯಮಾಪನ ಮಾಡುತ್ತಿವೆ ಎಂದು ಎಡಿಜಿಪಿ ಹೇಳಿದರು.
ವಶಪಡಿಸಿಕೊಂಡ ಡೈರಿಯಲ್ಲಿನ ಕೈ ಬರಹ ಆರೋಪಿಯದ್ದು ಎಂದು ಸಾಬೀತಾಗಿದೆ ಎಂದು ಎಡಿಜಿಪಿ ಹೇಳಿದ್ದಾರೆ. ಮಾಹಿತಿಯನ್ನು ವಿವಿಧ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ವಿವಿಧ ಸ್ಥಳಗಳಲ್ಲಿ ಸಾಕ್ಷ್ಯ ಸಂಗ್ರಹಿಸಲಾಗುವುದು. ತನಿಖೆ ಪ್ರಾಥಮಿಕ ಹಂತದಲ್ಲಿ ಮಾತ್ರ ಇದೆ. ಆರೋಪಿಗಳ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ಆರೋಪಿಯನ್ನು ಕೋಝಿಕ್ಕೋಡ್ಗೆ ಕರೆತರುವಾಗ ಯಾವುದೇ ಭದ್ರತಾ ಲೋಪವಾಗಿಲ್ಲ ಮತ್ತು ನೈಸರ್ಗಿಕ ಘಟನೆಗಳು ಮಾತ್ರ ನಡೆದಿವೆ ಎಂದು ಎಂಆರ್ ಅಜಿತ್ ಕುಮಾರ್ ಕೋಝಿಕ್ಕೋಡ್ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಿದ್ದಾರೆ.
ತಪೆÇ್ಪಪ್ಪಿಕೊಂಡ ಶಾರುಖ್ ಸೈಪಿ: ತನಿಖೆ ಪ್ರಾಥಮಿಕ ಹಂತದಲ್ಲಿ: ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್
0
April 07, 2023
Tags