HEALTH TIPS

13 ಮತ್ತು 14 ರಂದು ತ್ರಿಪ್ರಯಾರ್ ನಲ್ಲಿ ಮೀನುಗಾರರ ಸಂಘದ ರಾಜ್ಯ ಸಮ್ಮೇಳನ

              ತ್ರಿಶೂರ್: ಭಾರತೀಯ ಮತ್ಸ್ಯ ಕಾರ್ಯಕರ್ತರ ಸಂಘ ತನ್ನ 21ನೇ ರಾಜ್ಯ ಸಮ್ಮೇಳನವನ್ನು ಇದೇ 13 ಮತ್ತು 14ರಂದು ತ್ರಿಪ್ಯಾರ್‍ನಲ್ಲಿ ನಡೆಸಲಿದೆ.

             13ರಂದು ಸಂಜೆ 4 ಗಂಟೆಗೆ ಪ್ರದರ್ಶನ ಆರಂಭವಾಗಲಿದೆ.    

      ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಸಾರ್ವಜನಿಕ ಸಭೆ ಉದ್ಘಾಟಿಸುವರು. ಸೀಮಾ ಜಾಗರಣ್ ಮಂಚ್ ರಾಷ್ಟ್ರೀಯ ಸಂಯೋಜಕ ಎ. ಗೋಪಾಲಕೃಷ್ಣ ಪ್ರಧಾನ ಭಾಷಣ ಮಾಡಲಿದ್ದಾರೆ. ಮತ್ಸ್ಯ ಕಾರ್ಯಕರ್ತರ ಸಂಘದ ರಾಜ್ಯಾಧ್ಯಕ್ಷ ಪಿ.ಪಿ. ಉದಯ ಘೋಷ್, ಉಪಾಧ್ಯಕ್ಷ ಪಿ. ಪೀತಾಂಬರನ್ ಭಾಷಣ ಮಾಡಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ಕೆ. ಸತೀಶ್ಚಂದ್ರನ್ ಅಧ್ಯಕ್ಷತೆ ವಹಿಸುವರು.

          14ರಂದು ಬೆಳಗ್ಗೆ 9 ಗಂಟೆಗೆ ನಾಟಿಕಾ ಶ್ರೀನಾರಾಯಣ ಸಭಾಂಗಣದಲ್ಲಿ  ಪ್ರತಿನಿಧಿ ಸಭೆ ನಡೆಯಲಿದ್ದು,  ಗೋಪಾಲಕೃಷ್ಣ ಉದ್ಘಾಟಿಸುವರು. ತ್ರಿಪ್ರಯಾರ್ ಕಪಿಲಾಶ್ರಮದ ಸ್ವಾಮಿ ತೇಜಸ್ವರೂಪಾನಂದ ಸರಸ್ವತಿ ಆಶೀರ್ವಚನ ನೀಡಲಿದ್ದಾರೆ. ಸಂಜೆ 4.30ಕ್ಕೆ ನಡೆಯುವ ಸಮಾರೋಪದಲ್ಲಿ ಆರ್‍ಎಸ್‍ಎಸ್ ಹಿರಿಯ ಪ್ರಚಾರಕ ಎಸ್. ಸೇತುಮಾಧವನ್ ಪ್ರಧಾನ ಭಾಷಣ ಮಾಡಲಿದ್ದಾರೆ.

             ಮೀನುಗಾರರ ಕೆಲಸದ ಸುರಕ್ಷತೆ ಹಾಗೂ ಜೀವ- ಆಸ್ತಿ ರಕ್ಷಣೆಯಲ್ಲಿ ಸರಕಾರಗಳ ನಿರ್ಲಕ್ಷ್ಯದ ವಿರುದ್ಧ ಸಮಾವೇಶದಲ್ಲಿ ಹೋರಾಟ ರೂಪಿಸಲಾಗುವುದು ಎಂದು ರಾಜ್ಯಾಧ್ಯಕ್ಷ ಪಿ.ಪಿ. ಉದಯಘೋಷ್, ಪ್ರಧಾನ ಕಾರ್ಯದರ್ಶಿ ಸಿ.ಆರ್. ರಾಜೇಶ್, ಮಾಧ್ಯಮ ಸಂಚಾಲಕ ಲಾಲ್ ಊನುಂಗಲ್, ಸ್ವಾಗತ ಸಮಿತಿ ಅಧ್ಯಕ್ಷ ಕೆ. ಸತೀಶ್ಚಂದ್ರನ್, ಪ್ರಧಾನ ಸಂಚಾಲಕ ಕೆ.ಜಿ. ಸುರೇಶ್ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries