HEALTH TIPS

ಬ್ರಿಜ್‌ಭೂಷಣ್ ಹೇಳಿಕೆಗೆ ಕುಸ್ತಿಪಟುಗಳ ಖಂಡನೆ 'ಪದಕದ ಬೆಲೆ ₹ 15 ಮಾತ್ರ'

                ವದೆಹಲಿ: ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಅಧ್ಯಕ್ಷರಾಗಿದ್ದ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರು ಕುಸ್ತಿಪಟುಗಳ ಘನತೆ ಕುಗ್ಗಿಸುವ ಹೇಳಿಕೆ ನೀಡಿರುವುದನ್ನು ಪ್ರತಿಭಟನೆನಿರತ ಕುಸ್ತಿಪಟುಗಳು ಖಂಡಿಸಿದ್ದಾರೆ. 'ಕುಸ್ತಿಪಟುಗಳು ಗೆದ್ದ ಪದಕದ ಬೆಲೆ ₹ 15 ಮಾತ್ರ.

              ಸರ್ಕಾರವು ತರಬೇತಿಗೆ ವ್ಯಯಿಸಿರುವ ಕೋಟ್ಯಾಂತರ ರೂಪಾಯಿಗಳನ್ನು ಕೂಡಾ ಅವರು ಹಿಂದಿರುಗಿಸಲಿ' ಎಂದು ಬ್ರಿಜ್‌ಭೂಷಣ್‌, ವಿಡಿಯೊ ಸಂದರ್ಶನವೊಂದಲ್ಲಿ ಹೇಳಿದ್ದರು.

            'ಅವರು (ಬ್ರಿಜ್ ಭೂಷಣ್) ಪದಕವನ್ನು ನನಗೆ ದಾನವಾಗಿ ನೀಡಿಲ್ಲ. ನನ್ನ ರಕ್ತ ಮತ್ತು ಬೆವರು ಹರಿಸಿ ಅದನ್ನು ದೇಶಕ್ಕಾಗಿ ಗಳಿಸಿದ್ದೇನೆ. ನಮ್ಮ ಸಾಧನೆಗಳನ್ನು ನಿಜವಾಗಿಯೂ ಗೌರವಿಸುತ್ತಿದ್ದರೆ ಅವರು ಇಂತಹ ಮಾತುಗಳನ್ನು ಆಡಬಾರದಿತ್ತು' ಎಂದು ಬಜರಂಗ್‌ ಪೂನಿಯಾ ತಿರುಗೇಟು ನೀಡಿದ್ದಾರೆ.

                  'ಪದಕ ಬೆಲೆ ₹ 15 ಎಂದಿದ್ದಾರೆ. ಆದರೆ ಆ ಪದಕ ಗಳಿಸಲು 15 ವರ್ಷ ಪರಿಶ್ರಮ ಪಟ್ಟಿದ್ದೇವೆ' ಎಂದು ಹೇಳಿದ್ದಾರೆ.

                   'ಪದಕಕ್ಕಾಗಿ ನಾವು ಎಲ್ಲವನ್ನೂ ತ್ಯಾಗ ಮಾಡಿದ್ದೇವೆ. ದೇಶದ ಚಾಂಪಿಯನ್ ಅಥ್ಲೀಟ್‌ಗಳು ಇಂತಹ ಕೆಟ್ಟ ದಿನಗಳನ್ನು ಎದುರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ನಾನು ದೇಶಕ್ಕಾಗಿ ಗೆದ್ದಿರುವ ಈ ಪದಕಕ್ಕೆ ಬೆಲೆ ಕಟ್ಟಲು ಯಾರಿಗೂ ಸಾಧ್ಯವಿಲ್ಲ' ಎಂದು ಸಾಕ್ಷಿ ಮಲಿಕ್‌ ಪ್ರತಿಕ್ರಿಯಿಸಿದ್ದಾರೆ.

ಸಚಿನ್‌ ಪೈಲಟ್‌ ಭೇಟಿ: ಕಾಂಗ್ರೆಸ್‌ ನಾಯಕ ಸಚಿನ್ ಪೈಲಟ್‌ ಅವರು ಗುರುವಾರ ಜಂತರ್‌ ಮಂತರ್‌ಗೆ ಭೇಟಿ ನೀಡಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. 'ಕುಸ್ತಿಪಟುಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು' ಎಂದು ಅವರು ಆಗ್ರಹಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries