ನವದೆಹಲಿ: ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಅಧ್ಯಕ್ಷರಾಗಿದ್ದ ಬ್ರಿಜ್ಭೂಷಣ್ ಶರಣ್ ಸಿಂಗ್ ಅವರು ಕುಸ್ತಿಪಟುಗಳ ಘನತೆ ಕುಗ್ಗಿಸುವ ಹೇಳಿಕೆ ನೀಡಿರುವುದನ್ನು ಪ್ರತಿಭಟನೆನಿರತ ಕುಸ್ತಿಪಟುಗಳು ಖಂಡಿಸಿದ್ದಾರೆ. 'ಕುಸ್ತಿಪಟುಗಳು ಗೆದ್ದ ಪದಕದ ಬೆಲೆ ₹ 15 ಮಾತ್ರ.
ನವದೆಹಲಿ: ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಅಧ್ಯಕ್ಷರಾಗಿದ್ದ ಬ್ರಿಜ್ಭೂಷಣ್ ಶರಣ್ ಸಿಂಗ್ ಅವರು ಕುಸ್ತಿಪಟುಗಳ ಘನತೆ ಕುಗ್ಗಿಸುವ ಹೇಳಿಕೆ ನೀಡಿರುವುದನ್ನು ಪ್ರತಿಭಟನೆನಿರತ ಕುಸ್ತಿಪಟುಗಳು ಖಂಡಿಸಿದ್ದಾರೆ. 'ಕುಸ್ತಿಪಟುಗಳು ಗೆದ್ದ ಪದಕದ ಬೆಲೆ ₹ 15 ಮಾತ್ರ.
'ಅವರು (ಬ್ರಿಜ್ ಭೂಷಣ್) ಪದಕವನ್ನು ನನಗೆ ದಾನವಾಗಿ ನೀಡಿಲ್ಲ. ನನ್ನ ರಕ್ತ ಮತ್ತು ಬೆವರು ಹರಿಸಿ ಅದನ್ನು ದೇಶಕ್ಕಾಗಿ ಗಳಿಸಿದ್ದೇನೆ. ನಮ್ಮ ಸಾಧನೆಗಳನ್ನು ನಿಜವಾಗಿಯೂ ಗೌರವಿಸುತ್ತಿದ್ದರೆ ಅವರು ಇಂತಹ ಮಾತುಗಳನ್ನು ಆಡಬಾರದಿತ್ತು' ಎಂದು ಬಜರಂಗ್ ಪೂನಿಯಾ ತಿರುಗೇಟು ನೀಡಿದ್ದಾರೆ.
'ಪದಕ ಬೆಲೆ ₹ 15 ಎಂದಿದ್ದಾರೆ. ಆದರೆ ಆ ಪದಕ ಗಳಿಸಲು 15 ವರ್ಷ ಪರಿಶ್ರಮ ಪಟ್ಟಿದ್ದೇವೆ' ಎಂದು ಹೇಳಿದ್ದಾರೆ.
'ಪದಕಕ್ಕಾಗಿ ನಾವು ಎಲ್ಲವನ್ನೂ ತ್ಯಾಗ ಮಾಡಿದ್ದೇವೆ. ದೇಶದ ಚಾಂಪಿಯನ್ ಅಥ್ಲೀಟ್ಗಳು ಇಂತಹ ಕೆಟ್ಟ ದಿನಗಳನ್ನು ಎದುರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ನಾನು ದೇಶಕ್ಕಾಗಿ ಗೆದ್ದಿರುವ ಈ ಪದಕಕ್ಕೆ ಬೆಲೆ ಕಟ್ಟಲು ಯಾರಿಗೂ ಸಾಧ್ಯವಿಲ್ಲ' ಎಂದು ಸಾಕ್ಷಿ ಮಲಿಕ್ ಪ್ರತಿಕ್ರಿಯಿಸಿದ್ದಾರೆ.
ಸಚಿನ್ ಪೈಲಟ್ ಭೇಟಿ: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಗುರುವಾರ ಜಂತರ್ ಮಂತರ್ಗೆ ಭೇಟಿ ನೀಡಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. 'ಕುಸ್ತಿಪಟುಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು' ಎಂದು ಅವರು ಆಗ್ರಹಿಸಿದರು.