HEALTH TIPS

ಮಕ್ಕಳ ಯಕ್ಷಗಾನ ಬಳಗದಿಂದ ತಾಳಮದ್ದಳೆ

               ಮಂಜೇಶ್ವರ: ದೇರಂಬಳ ಎಲಿಯಾಣದ ಶ್ರೀ  ರಾಜರಾಜೇಶ್ವರೀ ಭಜನಾ ಮಂದಿರದ  ವಾರ್ಷಿಕೋತ್ಸವದ ಪ್ರಯುಕ್ತ  ಮೀಯಪದವಿನ ವಿದ್ಯಾವರ್ಧಕ  ಮಕ್ಕಳ ಯಕ್ಷಗಾನ ಬಳಗದಿಂದ  'ಹನುಮಾಗಮನ' ಕಥಾಭಾಗದ ತಾಳಮದ್ದಳೆ ಜರಗಿತು. ಪಾತ್ರ ವರ್ಗದಲ್ಲಿ ಶಾರ್ವರಿ ಯನ್. ನಾವಡ,  ಅಭಿರಾಮ ಭಟ್, ವೀಕ್ಷ, ಸಾನ್ನಿಧ್ಯ ಇ. ಮತ್ತು  ಸಾನ್ವಿ ಸುವರ್ಣ ಭಾಗವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ್ ಮಧೂರು, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಮೃದಂಗದಲ್ಲಿ ಮುರಳೀಮಾಧವ ಮಧೂರು ಸಹಕರಿಸಿದರು. ಅಧ್ಯಾಪಕರಾದ ನಾರಾಯಣ ನಾವಡ ಮಕ್ಕಳಿಗೆ ತರಬೇತಿಯನ್ನು ನೀಡಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries