HEALTH TIPS

ಮಾನವ-ವನ್ಯಜೀವಿ ಸಂಘರ್ಷಗಳ ಕುರಿತು ವರದಿ ನೀಡಲು ತಜ್ಞರ ಸಮಿತಿ ರಚಿಸಿದ ಕೇರಳ ಹೈಕೋರ್ಟ್

                ಕೊಚ್ಚಿ: ದಶಕಗಳಿಂದ ವ್ಯಾಪಕ ವಸತಿ ಪ್ರದೇಶಗಳಲ್ಲಿ ಕಳವಳಕ್ಕೀಡುಮಾಡುತ್ತಿರುವ ಮಾನವ-ವನ್ಯಜೀವಿ ಸಂಘರ್ಷಗಳ ಕುರಿತು ವರದಿ ನೀಡಲು ತಜ್ಞರ ಸಮಿತಿಯನ್ನು ರಚಿಸುವಂತೆ ಹೈಕೋರ್ಟ್ ಆದೇಶಿಸಿದೆ.

           ಅರಣ್ಯ ಪ್ರದೇಶಕ್ಕೆ ತಾಗಿಕೊಂಡಿರುವ ಪ್ರದೇಶಗಳಲ್ಲಿ ಭತ್ತದ ಗದ್ದೆ ಸಹಿತ ಕೃಷಿ ಭೂಮಿಗಳಿಗೆ ಕಾಡುಪ್ರಾಣಿಗಳು ದಾಳಿ ನಡೆಸಿ ಸಮಸ್ಯೆ ಸೃಷ್ಟಿಸದಂತೆ ತಡೆಯಲು ನ್ಯಾಯಾಲಯ ಸೂಚಿಸಿದೆ. ನೈಸರ್ಗಿಕ ಆವಾಸಸ್ಥಾನವನ್ನು ಪುನರುಜ್ಜೀವನಗೊಳಿಸಬೇಕು ಮತ್ತು ಕಾಡಿನಲ್ಲಿ ಹುಲ್ಲುಗಾವಲುಗಳನ್ನು ಪುನಃಸ್ಥಾಪಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

             ನ್ಯಾಯಮೂರ್ತಿ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಪಿ.ಗೋಪಿನಾಥ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಪ್ರಸ್ತಾವನೆಯನ್ನು ಮಾಡಿದೆ. 

            ತಜ್ಞರ ಸಮಿತಿಯು ಮಾನವ-ವನ್ಯಜೀವಿ ಸಂಘರ್ಷದ ಪ್ರದೇಶಗಳನ್ನು ಗುರುತಿಸಬೇಕು ಮತ್ತು ದೀರ್ಘಕಾಲೀನ ಮತ್ತು ಅಲ್ಪಾವಧಿಯ ಕ್ರಮಗಳನ್ನು ಕಂಡುಹಿಡಿಯಬೇಕು. ಆನೆ ದಂತಗಳ ಮಾರಾಟ ನಿಯಂತ್ರಣಕ್ಕೆ ರಚಿಸಲಾದ ವಿಶೇಷ ಕಾರ್ಯಪಡೆ ಬಳಸಲು, ಅವರಿಂದ ಮಾಹಿತಿ ವಿಶ್ಲೇಷಿಸಲು, ಪಡೆದ ಮಾಹಿತಿಯನ್ನು ಕಾರ್ಯಪಡೆಗೆ ರವಾನಿಸಲು ಮತ್ತು ಪಡೆಗಳ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಸಮಿತಿಗೆ ನ್ಯಾಯಾಲಯ ಸೂಚಿಸಿದೆ. ಇತ್ತೀಚೆಗೆ ಸುದ್ದಿಯಾದ ಆರಿಕೊಂಬನ ವಿಲೇವಾರಿ ಕುರಿತಂತೆ ಹೈಕೋರ್ಟ್ ನ ಹಿರಿಯ ವಕೀಲರು ಹಾಗೂ ಸಮಿತಿಯ ಸಂಚಾಲಕರಾಗಿದ್ದ ಎಸ್. ರಮೇಶ್ ಬಾಬು ನೂತನ ತಜ್ಞರ ಸಮಿತಿಯ ಸಂಚಾಲಕರು.

           ಸಮಿತಿಯ ಇತರ ಸದಸ್ಯರನ್ನು ನಿರ್ಧರಿಸುವ ಕುರಿತು ವರದಿ ಮಾಡಲು ನ್ಯಾಯವಾದಿ. ರಮೇಶ್ ಬಾಬು, ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಶೋಕ್ ಎಂ. ಚೆರಿಯನ್ ಮತ್ತಿತರರನ್ನು ನ್ಯಾಯಾಲಯ ನೇಮಿಸಿದೆ. ಅರ್ಜಿಯನ್ನು ಪರಿಗಣಿಸುವ 17ರಂದು ಈ ಸಂಬಂಧ ವರದಿ ಸಲ್ಲಿಸಲು ಸೂಚಿಸಲಾಗಿದೆ. ಅರಣ್ಯ ಭೂಮಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಕಸ ಸುರಿಯುತ್ತಿರುವುದನ್ನು ನ್ಯಾಯಾಲಯ ಟೀಕಿಸಿದೆ. ಈ ರೀತಿ ಕಸ ಶೇಖರಣೆಯಾಗುತ್ತಿರುವುದೇ ಪ್ರಾಣಿಗಳು ಕಾಡಿನಿಂದ ನಾಡಿಗಿಳಿಯಲು ಕಾರಣ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries