ಕೋಝಿಕ್ಕೋಡ್: ಎಲತ್ತೂರ್ ಉಗ್ರರ ದಾಳಿ ಪ್ರಕರಣದ ಪೊಲೀಸರ ತನಿಖೆಯಲ್ಲಿ ನಿಗೂಢತೆ ಕಂಡುಬಂದಿದೆ. ಕಾಸರಗೋಡು ಜಿಲ್ಲಾ ಕ್ರೈಂ ರೆಕಾರ್ಡ್ ಬ್ಯೂರೋ ಡಿವೈಎಸ್ಪಿ ಸಿಎ ಅಬ್ದುಲ್ ರಹೀಮ್ ಅವರ ದೂರಿನ ಮೇರೆಗೆ ಪೋಲೀಸರು ತನಿಖೆ ನಡೆಸುತ್ತಿದ್ದು, ಆರೋಪಿ ಶಾರುಖ್ ಸೈಫಿಯನ್ನು ಕೋಝಿಕ್ಕೋಡ್ಗೆ ಕರೆತರುವ ವೇಳೆ ರಕ್ಷಿಸಲು ಯತ್ನಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ.
ಡಿವೈಎಸ್ಪಿ ನೀಡಿದ ದೂರಿನ ಮೇರೆಗೆ ಚೇವಾಯೂರು ಪೊಲೀಸರು ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಯಾಗಿಲ್ಲ. ಮಾಧ್ಯಮ ಕಾರ್ಯಕರ್ತರನ್ನು ಪ್ರಶ್ನಿಸಿರುವುದು ಹಾಗೂ ಐಜಿಪಿ ವಿಜಯನ್ ಅವರನ್ನು ಅಮಾನತುಗೊಳಿಸಿರುವುದು ಪೊಲೀಸರ ಲೋಪವನ್ನು ಮುಚ್ಚಿಹಾಕಲು ಎಂದು ಆರೋಪಿಸಲಾಗಿದೆ.
ಅಪಘಾತದ ದೃಶ್ಯಾವಳಿಗಳನ್ನು ರೆಕಾರ್ಡ್ ಮಾಡಿದ ಮಾಧ್ಯಮ ಕಾರ್ಯಕರ್ತರನ್ನು ಕೋಝಿಕ್ಕೋಡ್ಗೆ ಕರೆಸಿ ವಿಚಾರಣೆ ನಡೆಸಿದ್ದನ್ನು ಪೊಲೀಸರು ಮರೆಮಾಚಿದ್ದಾರೆ. ಪತ್ರಕರ್ತರು ಮಾಡಿದ ಅಪರಾಧ ಮತ್ತು ಅವರ ಮೊಬೈಲ್ ಪೋನ್ಗಳನ್ನು ಏಕೆ ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿಲ್ಲ. ಏಪ್ರಿಲ್ 5 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಡಿವೈಎಸ್ಪಿ ಏಪ್ರಿಲ್ 30 ರಂದು ದೂರು ದಾಖಲಿಸಿರುವುದರ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ.
ಎಫ್ಐಆರ್ನಲ್ಲಿ, ಏಪ್ರಿಲ್ 5 ರಂದು ಪೊಲೀಸ್ ಸಿಬ್ಬಂದಿ ಸೇರಿದಂತೆ ಪ್ರಮುಖರ ಹತ್ಯೆಗೆ ಯತ್ನ ನಡೆದಿದೆ ಎಂದು ದಾಖಲಿಸಲಾಗಿದೆ. ಹೀಗಿದ್ದರೂ ಆರೋಪಿಗಳನ್ನು ಬಂಧಿಸಲು ವಿಳಂಬ ಮಾಡುತ್ತಿರುವುದು ಏಕೆ ಎಂಬುದೇ ಪ್ರಮುಖ ಪ್ರಶ್ನೆಯಾಗಿದೆ. ಡಿವೈಎಸ್ಪಿ ಸಂಬಂಧಿಕರ ಖಾಸಗಿ ವಾಹನದಲ್ಲಿ ಶಂಕಿತ ವ್ಯಕ್ತಿಯನ್ನು ಕರೆತರಲಾಗಿದ್ದು, ಸೂಕ್ತ ಪೆÇಲೀಸ್ ಬಂದೋಬಸ್ತ್ ಕಲ್ಪಿಸದಿರುವುದು ಪೆÇಲೀಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.





