ಕಾಸರಗೋಡು: ಜಿಲ್ಲೆಯ ಸಾಂಸ್ಕøತಿಕ ಸಂಘಟನೆ ರಂಗಚಿನ್ನಾರಿಯ ಅಂಗಸಂಸ್ಥೆ ಯಾಗಿ ರೂಪುಗೊಂಡ ನಾರಿಚಿನ್ನಾರಿ ವೇದಿಕೆ ಮೂಲಕ ಸುಗಮ ಸಂಗೀತದ ಬೆಳವಣಿಗೆ ಮತ್ತು ಪ್ರಸಾರಕ್ಕಾಗಿ ಪ್ರತ್ಯೇಕ ಘಟಕ ರಚನೆಯಾಗಲಿದೆ.
ಕಾಸರಗೋಡಿನ ಬಹಳಷ್ಟು ಮಂದಿ ಕವಿ -ಕವಯತ್ರಿಯರು ತಮ್ಮ ಪ್ರತಿಭೆ ಹಾಗೂ ಕಾವ್ಯ ಕೌಶಲದಿಂದ ಸೈ ಎನಿಸಿ ಕೊಂಡಿದ್ದು, ಇದರಲ್ಲಿ ಸುಮಧುರ ಭಾವಗೀತೆಗಳ ರಚನಾಕಾರರು, ಸುಗಮ ಸಂಗೀತದಲ್ಲಿ ತೊಡಗಿಸಿಕೊಂಡು ಜನಮನಸೂರೆಗೊಳ್ಳುತ್ತಿರುವ ಮಧುರ ಕಂಠದ ಗಾಯಕ -ಗಾಯಕಿಯರಿದ್ದಾರೆ.
ವಾದ್ಯಸಂಗೀತದಲ್ಲಿ ಪರಿಣತಿ ಸಾಧಿಸಿದವರು ಸೇರಿದಂತೆ ಭರವಸೆ ಮೂಡಿಸಿರುವ ಅದೆಷ್ಟೋ ಉದಯೋನ್ಮುಖ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಪೋಷಿಸುವ ನಿಟ್ಟಿನಲ್ಲಿ ಹೊಸ ಘಟಕ ರಚನೆಯಾಗಲಿದೆ. ಈ ನಿಟ್ಟಿನಲ್ಲಿ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಸಮಾನ ಆಸಕ್ತರ ಸಭೆ ಜೂ. 10ರಂದು ಸಂಜೆ 4ಕ್ಕೆ ಕರಂದಕ್ಕಾಡಿನಲ್ಲಿರುವ ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿರುವುದಾಗಿ ಪ್ರಕಟಣೆ ತಿಳಿಸಿದೆ