HEALTH TIPS

'ಇಲ್ಲಿ ಭಯದಿಂದ ಬದುಕುವುದಾದರೂ ಹೇಗೆ? ಆರೋಪಿಗಳು ಮ್ಯಾಜಿಸ್ಟ್ರೇಟ್ ಮೇಲೆ ಹಲ್ಲೆ ನಡೆಸುವ ಕಾಲ ದೂರವಿಲ್ಲ': ಮತ್ತೆ ಸರ್ಕಾರವನ್ನು ಟೀಕಿಸಿದ ಹೈಕೋರ್ಟ್

              ಎರ್ನಾಕುಳಂ: ಡಾ.ವಂದನಾ ಹತ್ಯೆ ಪ್ರಕರಣವನ್ನು ಹೈಕೋರ್ಟ್ ಮತ್ತೆ ಟೀಕಿಸಿದೆ. ಸರ್ಕಾರ ಸೋಮಾರಿತನವನ್ನು ಕಟು ಶಬ್ದಗಳಿಂದ ಟೀಕಿಸಿದೆ. 

              ಆರೋಪಿಗಳು ಮ್ಯಾಜಿಸ್ಟ್ರೇಟ್ ಮೇಲೆ ಹಲ್ಲೆ ನಡೆಸುವ ಕಾಲ ದೂರವಿಲ್ಲ ಎಂದೂ ನ್ಯಾಯಾಲಯ ಹೇಳಿದೆ. ಸರ್ಕಾರವು ಸಮಸ್ಯೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

            ಇಂದೂ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ ಅಲ್ಲವೇ, ಚಿಕಿತ್ಸೆಗಾಗಿ ಎಷ್ಟು ಜನ ಕಾಯುತ್ತಿದ್ದಾರೆ, ಈ ಹೊತ್ತಿನಲ್ಲಿ ಏನಾದ್ರೂ ತುರ್ತು ವ್ಯವಸ್ಥೆಗಳಿಗೆ ಏನು ಕ್ರಮ ಕೈಗೊಂಡಿದೆ ಎಂದು ಕೋರ್ಟ್ ಹೇಳಿದ್ದು, ಈಗ ಆಗುತ್ತಿರುವುದು ಮುಷ್ಕರವಲ್ಲ ವೈದ್ಯರು ಭಯಗೊಂಡಿದ್ದಾರೆ. ವೈದ್ಯರ ಮುಷ್ಕರ ಏನನ್ನೂ ಸಾಧಿಸಲು ಅಲ್ಲ, ಭಯದಿಂದ ಈ ಮುಷ್ಕರ ನಡೆಸಲಾಗುತ್ತಿದೆ, ಇಲ್ಲಿ ಭಯದಿಂದ ಬದುಕುವುದು ಹೇಗೆ ಎಂದು ನ್ಯಾಯಾಲಯ ಕೇಳಿದೆ. ಈ ವಿಷಯ ಹೊತ್ತಿ ಉರಿಯುವುದನ್ನು ತಡೆಯಲು ಸರ್ಕಾರ ಪ್ರಯತ್ನಿಸಬೇಕು ಎಂದೂ ಕೋರ್ಟ್ ಸೂಚಿಸಿದೆ.

            ಸರಕಾರ ಈ ವಿಚಾರವನ್ನು ಲಘುವಾಗಿ ಪರಿಗಣಿಸಬಾರದು. ಇದೊಂದು ವ್ಯವಸ್ಥೆಯ ವೈಫಲ್ಯ ಎಂದಿರುವ ನ್ಯಾಯಾಲಯ, ಇಂತಹದೊಂದು ವಿಚಾರ ಎಂದೂ ಕೇಳಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಸ್ವತಃ ಪೆÇಲೀಸರೇ ಹೇಳಿದ್ದಾರೆ. ಆರೋಪಿ ಸಂದೀಪ್ ನನ್ನು ಪೆÇಲೀಸ್ ಸಿಬ್ಬಂದಿ ಜೊತೆಯಲ್ಲಿಲ್ಲದೆ ವೈದ್ಯರ ಬಳಿಗೆ ಏಕೆ ಕರೆತರಲಾಯಿತು ಎಂದು ನ್ಯಾಯಾಲಯ ಕೇಳಿದೆ.

             ನಮ್ಮ ವ್ಯವಸ್ಥೆಯೇ ವಂದನಾಳ ಜೀವ ಹಾನಿಗೆ ಕಾರಣವಾಯಿತು. ಅದೇ ವ್ಯವಸ್ಥೆಯೇ ಆಕೆಯ ಪೋಷಕರ ದುಃಖಕ್ಕೆ ಕಾರಣವಾಯಿತು ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಘಟನೆ ನಡೆದ ಬಗೆಗೆ ಎಡಿಜಿಪಿ ಅಜಿತ್ ಕುಮಾರ್ ಆನ್ ಲೈನ್ ವಿಡಿಯೋ ಪ್ರೆಸೆಂಟೇಶನ್ ನೀಡಿದರು. ಅದನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries