ಕೊಲ್ಲಂ: ಕೊಲ್ಲಂ ತಾಲೂಕು ಆಸ್ಪತ್ರೆಯಲ್ಲಿ ಯುವ ವೈದ್ಯೆಯನ್ನು ಚಾಕುವಿನಿಂದ ಇರಿದು ಸಾವಿಗೆ ಕಾರಣವಾದ ಘಟನೆಯ ಕುರಿತು ಡಾ.ವಂದನಾ ಅವರ ಸ್ನೇಹಿತರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಕರ್ತವ್ಯಲೋಪವೆಸಗಿದ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳಲು ಆಗ್ರಹಿಸಿರುವರು.
ಆಸ್ಪತ್ರೆಯಲ್ಲಿ ಒಪಿ ಸೌಲಭ್ಯವಿಲ್ಲ. ಆರೋಪಿಯನ್ನು ಮೊದಲು ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ಯಲಾಯಿತು. ಪೊಲೀಸರಿಂದ ವೈಫಲ್ಯ ಕಂಡುಬಂದಿದೆ. ಆರೋಪಿ ಪ್ರಜ್ಞಾಪೂರ್ವಕವಾಗಿಯೇ ಕೊಲೆ ಮಾಡಿದ್ದಾನೆ. ಪ್ರಜ್ಞಾಹೀನನಾಗಿದ್ದರೆ ಕತ್ತರಿ ಹೇಗೆ ಕೈಗೆ ಬಂತು. ಪ್ರಜ್ಞೆ ತಪ್ಪಿ ಬಿದ್ದಿದ್ದರೆ ಕತ್ತರಿಯಿಂದ ಹೇಗೆ ಇರಿಯಲಾಗಿದೆ ಎಂದು ಡಾ.ವಂದನಾರ ಸಹೋದ್ಯೋಗಿಗಳು ಕೇಳಿದ್ದಾರೆ.
ದೀರ್ಘ ತನಿಖೆ ಅಗತ್ಯವಿಲ್ಲ. ಶೀಘ್ರ, ತ್ವರಿತ ನ್ಯಾಯಾಲಯದಲ್ಲಿ ಶಿಕ್ಷೆ ಜಾರಿಯಾಗಬೇಕು. ಬೇರೆ ರಾಜ್ಯಗಳಲ್ಲಿ ಹೀಗೇಕೆ ಆಗುತ್ತಿಲ್ಲ? ವಂದನಾಗೆ ನ್ಯಾಯ ಕೊಡಿಸಲು ಸರಕಾರ ಸಿದ್ಧವಾಗಬೇಕು. ಕೇರಳದ ವ್ಯವಸ್ಥೆಯಲ್ಲಿ ಗಂಭೀರ ದೋಷಗಳಿವೆ. ಪೊಲೀಸರು ಗಟ್ಟಿಯಾಗಿ ಮಧ್ಯಪ್ರವೇಶಿಸಬೇಕಿತ್ತು. ಬಂದೂಕು ಇಲ್ಲದ ಪೆÇಲೀಸರೂ ಇದ್ದಾರೆ. ರಾಜ್ಯದಲ್ಲಿ ಪೊಲೀಸರಿಗೆ ಸರಿಯಾದ ತರಬೇತಿ ಇಲ್ಲ. 70 ವರ್ಷದ ವೃದ್ಧರನ್ನು ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ನೇಮಿಸಲಾಗುತ್ತದೆ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಕೊಟ್ಟಾರಕ್ಕರ ಆಸ್ಪತ್ರೆಯ ಬ್ಲಾಕ್ಗೆ ವಂದನಾ ಹೆಸರಿರಿಸಲಾಗುವುದು ಎಂಬ ಆರೋಗ್ಯ ಸಚಿವರ ಹೇಳಿಕೆ ವಿರುದ್ದ ವಿರುದ್ಧ ಸ್ನೇಹಿತರು ಸಹ ಪ್ರತಿಕ್ರಿಯಿಸಿದ್ದಾರೆ. ಹೆಸರು ಕೊಟ್ಟರೆ ಎಲ್ಲವೂ ಪರಿಹಾರವಾದಂತೆ ಆಗುವುದೇ ಎಂದು ಸಹೋದ್ಯೋಗಿಗಳು ಕೇಳಿದರು. ಸುಗ್ರೀವಾಜ್ಞೆ ಹೊರಡಿಸುವಾಗ ಹಿರಿಯ ವೈದ್ಯರ ಅಭಿಪ್ರಾಯ ಕೇಳಬಾರದು ಎಂದು ಸಹೋದ್ಯೋಗಿಗಳು ಹೇಳಿದ್ದಾರೆ.
ಇದೇ ವೇಳೆ ತಿರುವಾಂಜೂರು ರಾಧಾಕೃಷ್ಣನ್ ಅವರು ಸಚಿವೆ ವೀಣಾ ಜಾರ್ಜ್ ವಿರುದ್ಧ ಹರಿಹಾಯ್ದರು. ಗ್ಲಿಸರಿನ್ ನಿಂದಾಗಿ ವೀಣಾ ಜಾರ್ಜ್ ಅಳುತ್ತಿದ್ದರು ಎಂದು ತಿರುವಾಂಜೂರು ಹೇಳಿದ್ದಾರೆ. ಕೈಯಿಂದ ಕಣ್ಣು ಮುಟ್ಟಿ ಅಳುತ್ತಿರುವುದನ್ನು ನಾನು ನೋಡಿದೆ. ಏನಾದರೂ ದುಃಖವಿದ್ದರೆ ನಿಮ್ಮ ನಿಲುವನ್ನು ತಿದ್ದಿಕೊಂಡು ಹೇಳುತ್ತಿರಲಿಲ್ಲವೇ? ಇದಲ್ಲದೆ, ಕೊಟ್ಟಾಯಂ ಡಿಸಿಸಿ ಅಧಕ್ಷ ಸುರೇಶ್ ಅವರು ವೀಣಾ ಜಾರ್ಜ್ ನಾಚಿಕೆಯಿಲ್ಲದ ವ್ಯಕ್ತಿ ಎಂದು ಟೀಕಿಸಿದರು. ಡಿಸಿಸಿಯ ಎಸ್ಪಿ ಕಚೇರಿ ಮೆರವಣಿಗೆಯಲ್ಲಿ ಸಚಿವರನ್ನು ನಾಚಿಕೆಗೇಡಿನ, ನಾಟಕದ ಸಚಿವೆ ಎಂದವರು ಲೇವಡಿಗೈದಿರುವರು.




