HEALTH TIPS

ಮಂಜೇಶ್ವರ ಬಂದರು ಸಂಪೂರ್ಣ ಅರ್ಥದಲ್ಲಿ ಸಾಕಾರತೆಯತ್ತ ಶೀಘ್ರ: ಸಚಿವ ಸಾಜಿ ಚೆರಿಯನ್

                        ಮಂಜೇಶ್ವರ: ಮಂಜೇಶ್ವರ ಬಂದರನ್ನು ಸಂಪೂರ್ಣ ಅರ್ಥದಲ್ಲಿ ಸಾಕಾರಗೊಳಿಸುವುದು ಸರ್ಕಾರದ ಗುರಿ ಎಂದು ಮೀನುಗಾರಿಕೆ, ಸಂಸ್ಕøತಿ ಮತ್ತು ಯುವಜನ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಹೇಳಿದರು. 

                ಮಂಜೇಶ್ವರ ಕ್ಷೇತ್ರದಲ್ಲಿ ಕರಾವಳಿ ಸಭೆಯನ್ನು ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು. 

          ಮೀನುಗಾರಿಕೆ ಇಲಾಖೆಯ ನೇತೃತ್ವದಲ್ಲಿ ರಾಜ್ಯದಲ್ಲಿ ಹೆಚ್ಚಿನ ಶಾಲೆಗಳಿಗೆ ಅವಕಾಶ ನೀಡಲಾಗುವುದು ಮತ್ತು ಮಂಜೇಶ್ವರ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. 112 ಕೋಟಿ ವೆಚ್ಚದಲ್ಲಿ ಕುಂಬಳೆ ಕೊಯಿಪ್ಪಾಡಿ-ಆರಿಕ್ಕಾಡಿ  ಕುಡಿಯುವ ನೀರಿನ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲಾಗುವುದು. 

              ಮಂಜೇಶ್ವರ ಕ್ಷೇತ್ರದಲ್ಲಿ ಕರಾವಳಿ ರಸ್ತೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಮೀನುಗಾರ ಕುಟುಂಬಗಳ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸಿ ಉನ್ನತ ಸ್ಥಾನಕ್ಕೇರಬೇಕು. ಪಾಲಕರು ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಬೇಕು. ಮೀನುಗಾರಿಕೆ ಇಲಾಖೆ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಎಂದು ಸಚಿವರು ಹೇಳಿದರು. ಕರಾವಳಿ ಪೊಲೀಸ್, ಕಂದಾಯ ಮತ್ತು ಮೀನುಗಾರಿಕೆ ಜಂಟಿಯಾಗಿ ವಿದೇಶಿ ದೋಣಿಗಳ ಅಕ್ರಮ ಮೀನುಗಾರಿಕೆ ತಡೆಗಟ್ಟಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಮೀನುಗಾರಿಕೆಗೆ ತೆರಳುವಾಗ ಮತ್ತು ಹಿಂದಿರುಗುವಾಗ ಲೈಫ್ ಜಾಕೆಟ್‍ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಸಚಿವರು ನೆನಪಿಸಿದರು. 


           ಮೀನುಗಾರಿಕಾ ವಲಯದಲ್ಲಿ ಮಧ್ಯವರ್ತಿಗಳ ಶೋಷಣೆಯಿಂದ ಮೀನುಗಾರರನ್ನು ರಕ್ಷಿಸಲು ಇಲಾಖೆಯು ಸಮಗ್ರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಸಚಿವರು ಹೇಳಿದರು. ಮೀನುಗಾರಿಕಾ ಮಹಿಳೆಯರಿಗೆ ಬಿಸಿಲು ಮತ್ತು ಮಳೆಗೆ ತುತ್ತಾಗದೆ ಸುರಕ್ಷಿತವಾಗಿ ಮೀನು ಮಾರಾಟ ಮಾಡಲು ಅಗತ್ಯ ಆಶ್ರಯ ಮತ್ತು ಡ್ರೆಸ್ ಕೋಡ್‍ಗಳನ್ನು ಒದಗಿಸುವ ಮೂಲಕ ಮೀನುಗಾರಿಕೆ ಕ್ಷೇತ್ರವನ್ನು ಆಧುನೀಕರಿಸಲಾಗುವುದು. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮುದ್ರದಲ್ಲಿ ಎಸೆಯುವುದರಿಂದ ಮೀನುಗಳ ಸಂಪತ್ತು ಕುಸಿಯುತ್ತಿದೆ, ಆದ್ದರಿಂದ ಎಲ್ಲಾ ಮೀನುಗಾರರು ಮತ್ತು ಕರಾವಳಿ ನಿವಾಸಿಗಳು ಸರ್ಕಾರದ ಸ್ವಚ್ಛ ಸಮುದ್ರ ಮತ್ತು ಸುಂದರ ಕರಾವಳಿ ಅಭಿಯಾನವನ್ನು ಅನುಸರಿಸಬೇಕು ಎಂದು ಸಚಿವರು ಹೇಳಿದರು.    

           ಶಾಸಕ ಎ.ಕೆ.ಎಂ.ಅಶ್ರಫ್  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇರಳದ ಮುಖ್ಯಮಂತ್ರಿಗಳು ಹೇಳಿದಂತೆ ಮೀನುಗಾರರು ಕೇರಳದ ಸೇನೆಯಾಗಿದ್ದು, ಅವರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯೇ ಇಲಾಖೆ ಗುರಿಯಾಗಿದೆ. ಮಂಜೇಶ್ವರ ತೀರ  ಸದಸ್‍ನಲ್ಲಿ ಆನ್‍ಲೈನ್‍ನಲ್ಲಿ 414 ದೂರುಗಳು ಬಂದಿವೆ. ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ 37 ದೂರುಗಳು, ಮೀನುಗಾರಿಕಾ ಹಡಗುಗಳಿಗೆ ಸಂಬಂಧಿಸಿದ ಏಳು ದೂರುಗಳು, ಪುನರ್ಗೆಹಂ ಯೋಜನೆಗೆ ಸಂಬಂಧಿಸಿದಂತೆ 26 ದೂರುಗಳು, ಓಖಿ ಸಹಾಯಕ್ಕೆ ಸಂಬಂಧಿಸಿದಂತೆ ಒಂದು ದೂರು, ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದಂತೆ ಮೂರು ದೂರುಗಳು, ಕ್ಷೇಮ ನಿಧಿ ಮಂಡಳಿಗೆ ಸಂಬಂಧಿಸಿದ 14 ದೂರುಗಳು, ಸ್ಥಳೀಯಾಡಳಿತ  ಸಂಸ್ಥೆಗಳಿಗೆ 289 ದೂರುಗಳು ಲಭಿಸಿದೆ.  ಸಹಕಾರಿ ಸಾಲಕ್ಕೆ ಸಂಬಂಧಿಸಿದ ದೂರುಗಳು, ಮತ್ಸ್ಯಫೆಡ್, ಬಂದರುಗಳಿಗೆ ಸಂಬಂಧಿಸಿದ ಒಂಬತ್ತು ದೂರುಗಳು, ಎಂಜಿನಿಯರ್‍ಗಳಿಗೆ ಸಂಬಂಧಿಸಿದಂತೆ 11 ದೂರುಗಳು, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಐದು ದೂರುಗಳು, ಸಹಕಾರ ಇಲಾಖೆಗೆ ಸಂಬಂಧಿಸಿದಂತೆ 10 ದೂರುಗಳು, ಜಲ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಎರಡು ದೂರುಗಳು, ಪೆÇಲೀಸ್ ಮೂರು ದೂರುಗಳು, 5 ದೂರುಗಳು ನಾಗರಿಕ ಸರಬರಾಜು, ಲೀಡ್ ಬ್ಯಾಂಕ್‍ಗೆ ಸಂಬಂಧಿಸಿದ ಮೂರು ದೂರುಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಒಂದು ದೂರು. ಮೀನುಗಾರಿಕೆ ಇಲಾಖೆ ಮತ್ತು ಅದರ ಸಂಯೋಜಿತ ಸಂಸ್ಥೆಗಳು ಸೇರಿದಂತೆ ಇತರ ಕೆಲವು ಇಲಾಖೆಗಳಿಗೆ ಸಂಬಂಧಿಸಿದ 76 ಅರ್ಜಿಗಳನ್ನು ಅದಾಲತ್ ನಿರ್ಧರಿಸಿದೆ. ಉಳಿದ 338 ಅರ್ಜಿಗಳು ವಿಲೇವಾರಿಗೆ ವಿವಿಧ ಇಲಾಖೆಗಳ ಪರಿಶೀಲನೆಯಲ್ಲಿವೆ.


          ಸಾಜಿ ಚೆರಿಯನ್ ಅವರು ಮೀನುಗಾರಿಕೆ ಕ್ಷೇತ್ರದಿಂದ ಶಿಕ್ಷಣ, ಕ್ರೀಡೆ ಮತ್ತು ಕೆಲಸ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 39 ಜನರನ್ನು ಸನ್ಮಾನಿಸಿದರು. ಮೀನುಗಾರರ ಕಲ್ಯಾಣ ಮಂಡಳಿಯ ಮೂಲಕ 21 ಜನರಿಗೆ ಮದುವೆ ಸಹಾಯಧನವಾಗಿ 10,000 ರೂ., ಮರಣೋತ್ತರ ಸಹಾಯವಾಗಿ 4 ಜನರಿಗೆ 60,000 ರೂ., ಸುರಕ್ಷಿತವಾಗಿ ನಿರತ ಯೋಜನೆಯಡಿ ಮಹಿಳೆಯರಿಗೆ 1,00,000 ರೂ.ಗಳನ್ನು ಆವರ್ತ ನಿಧಿಯಾಗಿ ಒಟ್ಟು 21 ಜನರಿಗೆ ವಿತರಿಸಲಾಯಿತು. ಮೀನು ವ್ಯಾಪಾರ, ಮತ್ತು ಒಟ್ಟು 4,30,000 ರೂ.ಗಳನ್ನು ತೀರ ಸದಸ್ ನಲ್ಲಿ ವಿತರಿಸಲಾಯಿತು. ಮಕ್ಕಳ ಮತ್ತು ಸ್ಥಳೀಯ ಕಲಾವಿದರ ಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು. 

              ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಮತ್ಸ್ಯಫೆಡ್ ಅಧ್ಯಕ್ಷ ಟಿ.ಮನೋಹರನ್, ಮತ್ಸ್ಯ ಮಂಡಳಿ ಅಧ್ಯಕ್ಷ ಕೂಟೈ ಬಶೀರ್, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಪಿ.ಕೆ.ಮುಹಮ್ಮದ್ ಹನೀಫ್, ಕುಂಬಳೆ ಪಂಚಾಯಿತಿ ಅಧ್ಯಕ್ಷ ಯು.ಪಿ. ತಾಹಿರಾ ಯೂಸುಫ್, ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ,  ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ ರೆಹಮಾನ್, ಜಿಲ್ಲಾ ಪಂಚಾಯತ್ ಸದಸ್ಯೆ ಜಮೀಲಾ ಸಿದ್ದೀಕ್, ಬ್ಲಾಕ್ ಪಂಚಾಯತ್ ಸದಸ್ಯರಾದ ಸಫಾ ಫಾರೂಕ್, ಶಮ್ಸೇನ, ಮಂಗಲ್ಪಾಡಿ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮುಹಮ್ಮದ್ ಹುಸೇನ್, ಕಾಸರಗೋಡು  ಮೀನುಗಾರಿಕಾ ಉಪನಿರ್ದೇಶಕ ಪಿ.ವಿ.ಸತೀಶನ್, ಮೀನುಗಾರಿಕೆ ಹೆಚ್ಚುವರಿ ನಿರ್ದೇಶಕ ಎನ್.ಎಸ್.ಶ್ರೀಲು, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ವಿ.ವಿ. ರಮೇಶ, ಮೀನುಗಾರರು, ವಿವಿಧ ಇಲಾಖೆಗಳ ನೌಕರರು ಮತ್ತಿತರರು ಭಾಗವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನಾ ಟೀಚರ್ ಸ್ವಾಗತಿಸಿ, ಮೀನುಗಾರಿಕಾ ಜಂಟಿ ನಿರ್ದೇಶಕ ಎ.ಪಿ.ಸತೀಶ್ ಕುಮಾರ್ ವಂದಿಸಿದರು. 


                                                  ಮನವಿ:

      ಸನ್ಮನಸ್ಸಿನ ಓದುಗರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ. 

    ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:

      ಗೂಗಲ್ ಪೇ: 7907952070

   ಬ್ಯಾಂಕ್ ವಿವರ: 

    ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.

 CANARA BANK
BADIYADKA BRANCH
A/c NUMBER: 0611101029775
IFSC: CNRB0004489

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries