HEALTH TIPS

ಇಂದು ಸಿರಿಬಾಗಿಲಿನಲ್ಲಿ ತೆಂಕು ತಿಟ್ಟು ಯಕ್ಷಗಾನ ಭಾಗವತಿಕೆ ಕಾರ್ಯಗಾರ

             ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ಇಂದು(ಜೂ.25) ತೆಂಕು ತಿಟ್ಟು ಯಕ್ಷಗಾನ ಭಾಗವತಿಕೆ ಶಿಬಿರ ನಡೆಯಲಿದೆ.  ಯಕ್ಷಗಾನ ಭಾಗವತಿಕೆಗೆ ಒಂದು ನಿರ್ದಿಷ್ಟ ವ್ಯಾಪ್ತಿ ಇದೆ. ಅದನ್ನು ಮೀರಿದ ಪ್ರಯೋಗ ನಡೆಸಿ ವಿರೂಪ  ಗೊಳಿಸಬಾರದು.  ಆ ಉದ್ದೇಶ ವಿರಿಸಿ ನಡೆಯುವ ವಿಶೇಷ ಕಾರ್ಯಾಗಾರ. ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರ  ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

         ಬೆಳಗ್ಗೆ 9 ರಿಂದ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ  ನಡೆಯುವ ಕಾರ್ಯಾಗಾರವನ್ನು ತೆಂಕುತಿಟ್ಟು ಹಿಮ್ಮೇಳ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಉದ್ಘಾಟಿಸುವರು. ಕಂಠಸ್ವರ ರಕ್ಷಣೆಗೆ ಯೋಗ, ಭಾಗವತನ ಕರ್ತವ್ಯ, ಛಂದಸ್ಸಿಗೆ ಲೋಪವಾಗದೆ ಹಾಡುಗಾರಿಕೆ,  ಹಿಮ್ಮೇಳ- ಮುಮ್ಮೇಳದ ಸಾಂಗತ್ಯ, ಪ್ರಸಂಗ ಮಾಹಿತಿ, ಪೂರ್ವರಂಗದ ವೈಶಿಷ್ಟ್ಯ ಇತ್ಯಾದಿ ವಿಷಯಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ- ಆಸಕ್ತ ರಿಗೆ ಅವಕಾಶ ಮೂಲಕ ಶಿಬಿರ ನಡೆಯಲಿದೆ. ಶಿಬಿರಾರ್ಥಿಗಳಲ್ಲದೆ ಯಕ್ಷಗಾನ ಯುವ ವೃತ್ತಿ- ಹವ್ಯಾಸಿ  ಭಾಗವತರು, ಕಲಾವಿದರು ಭಾಗವಹಿಸುವರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries