ಕಣ್ಣೂರು: ಕೊಟ್ಟಿಯೂರು ವೈಶಾಖ ಮಹೋತ್ಸವದ ಅಂಗವಾಗಿ ರೋಹಿಣಿ ಆರಾಧನೆ ಇಂದು ನಡೆಯಿತು. ಇಂದು ವೈಶಾಖ ಹಬ್ಬದ ನಾಲ್ಕನೇ ಮತ್ತು ಕೊನೆಯ ರೋಹಿಣಿ ಆರಾಧನೆಯಾಗಿದೆ.
ಕೊಟ್ಟಿಯೂರು ಪೆರುಮಾಳ್ನ ಮಣ್ಣಿಗೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ರೋಹಿಣಿ ಆರಾಧನೆಯ ದಿನದಂದು ಆಲಿಂಗನ ಪುμÁ್ಪಂಜಲಿ ಎಂಬ ವಿಶೇಷ ಸಮಾರಂಭ ನಡೆಯುತ್ತದೆ.
ಕೊಟ್ಟಿಯೂರು ದೇವರ ಸನ್ನಿಧಿಯು ಕೇರಳದ ವಿವಿಧ ಭಾಗಗಳಿಂದ ಬಂದಿರುವ ಭಕ್ತರಿಂದ ಶಿವ ಮಂತ್ರಗಳಿಂದ ಮೊಳಗುತ್ತಿದೆ. ಆಲಿಂಗನ ಪುμÁ್ಪಂಜಲಿಯ ನಂತರ ಸಮಾರೋಪ ಕ್ರಿಯೆಗಳು ಆರಂಭವಾಗಲಿವೆ. ಕೊಟ್ಟಿಯೂರು ಪೆರುಮಾಳ್ಗೆ ಅರ್ಪಿಸುವ ವಲಿಯವತ್ತಲಂ ಪಾಯಸ ನಿವೇದ್ಯವನ್ನು ಚತುಷ್ಠಂ ಎಂದು ಕರೆಯಲಾಗುತ್ತದೆ.
19 ರಂದು ವೈಶಾಖ ಹಬ್ಬದ ನಾಲ್ಕು ಚತುಸ್ತಂಗಳಲ್ಲಿ ಮೊದಲನೆಯ ತಿರುವಾತೀರ ಚತುಷ್ಠಂ ನಡೆಯಲಿದೆ. ತಿರುವಾತಿರವು ಶಿವನ ಜನ್ಮದಿನವೂ ಆಗಿದೆ. 20ರಂದು ಪುನರ್ತಮ ಚತುಷ್ಠಂ, 22ರಂದು ಆಯಿಲ್ಯಂ ಚುತುಷ್ಠಂ, 24ರಂದು ಮಕಂ ಕಾಲಂ ವರವ ಮುಂತಾದ ಕಾರ್ಯಕ್ರಮಗಳೂ ನಡೆಯಲಿವೆ. 27ರಂದು ಆತ್ಮ ಚತುಷ್ಠಂ, ವಾಲಟ್ಟಂ, ಕಲಶಪೂಜೆ ನಡೆಯಲಿದ್ದು, 28ರಂದು ತ್ರಿಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿವೆ.


