HEALTH TIPS

ಕುಳೂರು ಶಾಲೆಯಲ್ಲಿ ಚುನಾವಣೆಯ ಮೂಲಕ ಶಾಲಾ ನಾಯಕನ ಆಯ್ಕೆ ; ಪ್ರಜಾಪ್ರಭುತ್ವ ವ್ಯವಸ್ಥೆಯ ನೈಜ ಅನುಭವವನ್ನು ಪಡೆದ ಮಕ್ಕಳು :


               ಮಂಜೇಶ್ವರ : ಭಾರತವು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಈ ವ್ಯವಸ್ಥೆಯ ನೈಜ ಅನುಭವವನ್ನು ಮಕ್ಕಳು ಪಡೆಯಲು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ನಾಯಕನ ಆಯ್ಕೆಗೆ ಶಾಲಾ ಚುನಾವಣೆ ನಡೆಯಿತು.
           ಹಿಂದಿನ ದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ತಮ್ಮ ನಾಮ ಪತ್ರವನ್ನು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯ ಶಿಕ್ಷಕರ ಹೊಣೆಯನ್ನು ಹೊತ್ತಿರುವ ಶಾಲಾ ಶಿಕ್ಷಕಿ ಸೌಮ್ಯ ಪಿ ರವರಿಗೆ ಸಲ್ಲಿಸಿದರು. ಜೊತೆಗೆ ಅಭ್ಯರ್ಥಿಗಳು ಪ್ರಚಾರ ಕಾರ್ಯವನ್ನೂ ನಡೆಸಿದರು.

           ನಿನ್ನೆ  ನಡೆದ ಚುನಾವಣಾ ಪ್ರಕ್ರಿಯೆಯು ಮಕ್ಕಳಿಗೆ ನೈಜ ಅನುಭವವನ್ನು ತಂದಿತು. ಮತ ಚಲಾಯಿಸಲು ಬಂದ ಮಕ್ಕಳು ತಮ್ಮ ಕೈಗೆ ಚುನಾವಣಾ ಗುರುತನ್ನು ಹಾಕಿಸಿಕೊಂಡು, ಗುಪ್ತ ಮತದಾನದ ಮೂಲಕ ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತವನ್ನು ಚಲಾಯಿಸಿದರು.
        ಚುನಾವಣಾ ಪ್ರಕ್ರಿಯೆಯನ್ನು ಶಾಲಾ ಮಕ್ಕಳೇ ನಿರ್ವಹಿಸಿದ್ದು ವಿಶೇಷವಾಗಿತ್ತು. ಶಾಲಾ ವಿದ್ಯಾರ್ಥಿಗಳಾದ ಕುಮಾರಿ ಸಾಕ್ಷಿ ಎ, ಯದ್ವಿ ಕೆ ಶೆಟ್ಟಿ, ದೀಕ್ಷ ಎ, ಗಣ್ಯ, ಕಿಶನ್ ಡಿ ಹಾಗೂ ಪ್ರಜ್ವಲ್ ಡಿ ಈ ಪ್ರಕ್ರಿಯೆಯಲ್ಲಿ ಸಹಕರಿಸಿದರು.
          ಬಳಿಕ ಚುನಾವಣಾ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ನಡೆಯಿತು. ತೀವ್ರ ಪೈಪೋಟಿಯನ್ನು ಇತ್ತ ಇಬ್ಬರು ಅಭ್ಯರ್ಥಿಗಳು ಅಂತಿಮವಾಗಿ ಸಮಾನ ಮತಗಳನ್ನು ಪಡೆಯುವ ಮೂಲಕ ಚುನಾವಣೆಯನ್ನು ಇನ್ನಷ್ಟು ರಂಗೇರುವಂತೆ ಮಾಡಿದರು. ಬಳಿಕ ಚೀಟಿ ಎತ್ತುವ ಮೂಲಕ ನಾಯಕ ಹಾಗೂ ಉಪ ನಾಯಕರನ್ನು ಆಯ್ಕೆ ಮಾಡಲಾಯಿತು. ಶಾಲಾ ನಾಯಕನಾಗಿ ಚಾರ್ವಿನ್ ಆಳ್ವ, ಉಪ ನಾಯಕಿಯಾಗಿ ಕುಮಾರಿ ಸಾನ್ವಿ ಶೆಟ್ಟಿ ಆಯ್ಕೆಯಾದರು. ಆರೋಗ್ಯ ಮಂತ್ರಿಯಾಗಿ ಕುಮಾರಿ ತನ್ವಿ ಎಸ್ ಪೂಜಾರಿ, ಕ್ರೀಡಾ ಮಂತ್ರಿಯಾಗಿ ಕುಮಾರಿ ಶ್ರೀನಿಕ ವಿ. ಆರ್ ಹಾಗೂ ಸಾಂಸ್ಕೃತಿಕ ಮಂತ್ರಿಯಾಗಿ ಕುಮಾರಿ ದೃಶ ಎ ಆಯ್ಕೆಯಾದರು.

        ಶಾಲಾ ಮುಖ್ಯ ಶಿಕ್ಷಕರ ಹೊಣೆಯನ್ನು ಹೊತ್ತಿರುವ ಶಿಕ್ಷಕಿ ಸೌಮ್ಯ ಪಿ ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಬಳಿಕ ವಿಜೇತ ಅಭ್ಯರ್ಥಿಗಳ ವಿಜಯ ಘೋಷ ಯಾತ್ರೆ ನಡೆಯಿತು. ಶಾಲಾ ಶಿಕ್ಷಕ ವೃಂದ ಜೊತೆಗಿದ್ದು ಸಹಕರಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries