ತಿರುವನಂತಪುರ: ರಾಜ್ಯದಲ್ಲಿ ಪದೇ ಪದೇ ಇಲಾಖೆಗಳಲ್ಲಿ ಬದಲಾವಣೆಯಾಗುತ್ತಿರುವುದನ್ನು ವಿರೋಧಿಸಿ ಐಎಎಸ್ ಅಧಿಕಾರಿಗಳು ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.
ರಾಜ್ಯದಲ್ಲಿ ಅಖಿಲ ಭಾರತ ನಾಗರಿಕ ಸೇವಾ ನಿಯಮಾವಳಿಗಳನ್ನು ಪಾಲಿಸದೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ಅಧಿಕಾರಿಗಳು ತಿಂಗಳೊಳಗೆ ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ವರ್ಗಾವಣೆಯಾಗುತ್ತಾರೆ. ಈ ರೀತಿ ಸುಮಾರು 30 ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ. ಅವರಲ್ಲಿ ಒಂದು ತಿಂಗಳಲ್ಲಿ ಎರಡು ಬದಲಾವಣೆಗಳಾಗಿವೆ. ಐಎಎಸ್ ಅಸೋಸಿಯೇಷನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪರಿಹಾರ ನೀಡುವಂತೆ ಕೋರಿದೆ.
ಅಖಿಲ ಭಾರತ ಸೇವಾ ಕಾಯಿದೆ (1951) ಅಡಿಯಲ್ಲಿ ರಾಜ್ಯ ನಾಗರಿಕ ಸೇವಾ ಮಂಡಳಿಯ ಶಿಫಾರಸಿನ ಮೂಲಕ ವರ್ಗಾವಣೆ ಮತ್ತು ನೇಮಕಾತಿ ಆಗಬೇಕು ಎಂದು ಅಧಿಕಾರಿಗಳು ಆಗ್ರಹಿಸಿದರು. ಕೇಡರ್ ಹುದ್ದೆಗಳು ಮತ್ತು ತತ್ಸಮಾನ ಹುದ್ದೆಗಳಿಗೆ ನೇಮಕಾತಿಗಳು ಸುಪ್ರೀಂ ಕೋರ್ಟ್ ನಿರ್ಧರಿಸಿದಂತೆ 2 ವರ್ಷಗಳ ಅವಧಿಗೆ. ಕೇಡರ್ ಹುದ್ದೆಗಳಿಗೆ ಕನಿಷ್ಠ 2 ವರ್ಷಗಳ ಅವಧಿಯನ್ನು ಕೇರಳ ಪರಿಗಣಿಸುವುದಿಲ್ಲ. 2 ವರ್ಷಗಳ ಮೊದಲು ಸ್ಥಳ ಬದಲಾವಣೆಯಾದರೆ ಸರ್ಕಾರ ಅನುಸರಿಸಬೇಕಾದ ನಿಯಮ ಮತ್ತು ಕಾರ್ಯವಿಧಾನವನ್ನು ಅನುಸರಿಸುವಂತೆ ಪತ್ರದಲ್ಲಿ ಕೋರಲಾಗಿದೆ.
ಕೇರಳದಲ್ಲಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ನಾಗರಿಕ ಸೇವಾ ಮಂಡಳಿ ಸಭೆ ನಡೆಸುವುದಿಲ್ಲ. 2 ವರ್ಷಗಳ ನಂತರ ಬದಲಾವಣೆ ಮಾಡಬೇಕಾದ ಅಧಿಕಾರಿಗಳ ಅಭಿಪ್ರಾಯವನ್ನು ಆಲಿಸಿ ನಿರ್ಧಾರವನ್ನು ಶಿಫಾರಸು ಮಾಡಲು ಮಂಡಳಿಗೆ ಬಿಡುವುದು, ನೇಮಕಾತಿಯಲ್ಲಿನ ಸಾಮಥ್ರ್ಯವನ್ನು ಪರಿಗಣಿಸುವುದು ಮತ್ತು ಇಲ್ಲದೆ ಮಾಡಿದ ಬದಲಾವಣೆಗಳಿಗೆ ಕಾರಣವನ್ನು ದಾಖಲಿಸುವುದು ಮುಂತಾದ ಸಲಹೆಗಳನ್ನು ಸಂಘವು ಮುಂದಿಟ್ಟಿದೆ.


