HEALTH TIPS

ವನ ಮಹೋತ್ಸವ: ಇಂದು ತಿರುವನಂತಪುರದಲ್ಲಿ ರಾಜ್ಯ ಮಟ್ಟದ ಸಮಾರೋಪ: ಸಚಿವ ಎ.ಕೆ. ಶಶೀಂದ್ರನ್ ಉದ್ಘಾಟನೆ

             ತಿರುವನಂತಪುರ: ವನ ಮಹೋತ್ಸವದ ರಾಜ್ಯ ಮಟ್ಟದ ಸಮಾರೋಪ ಇಂದು(ಜುಲೈ 07) ತಿರುವನಂತಪುರದಲ್ಲಿ ನಡೆಯಲಿದೆ. ಜಗತಿ ಸರ್ದಾಕರ ಕಿವುಡರ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಬೆಳಗ್ಗೆ 10 ಗಂಟೆಗೆ ಅರಣ್ಯ ಮತ್ತು ವನ್ಯಜೀವಿ ಸಚಿವ ಎ.ಕೆ. ಶಶೀಂದ್ರನ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

           ಸಾರಿಗೆ ಇಲಾಖೆ ಸಚಿವ ಅ. ಅಂತೋಣಿರಾಜು ಅಧ್ಯಕ್ಷತೆ ವಹಿಸುವರು. ಸಂಸದ ಶಶಿ ತರೂರ್ ಮತ್ತು ಮೇಯರ್ ಆರ್ಯ ರಾಜೇಂದ್ರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮುಖ್ಯ ವನ್ಯಜೀವಿ ವಾರ್ಡನ್ ಗಂಗಾ ಸಿಂಗ್ ವನ ಮಹೋತ್ಸವದ ಸಮಾರೋಪ ಸಂದೇಶ ನೀಡಲಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ನಿರ್ವಹಣೆ) ನೋಯೆಲ್ ಥಾಮಸ್ ಈ ಸಂದರ್ಭ ಉಪಸ್ಥಿತರಿರುವರು. 

           ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಯೋಜನೆ ಮತ್ತು ಅಭಿವೃದ್ಧಿ) ಡಿ.ಜಯಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ಇ.ಪ್ರದೀಪ್ ಕುಮಾರ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಆಡಳಿತ) ಡಾ. ಪಿ.ಪುಕಸೇಂತಿ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ( ವಿಜಿಲೆನ್ಸ್, ಫಾರೆಸ್ಟ್ ಇಂಟೆಲಿಜೆನ್ಸ್) ಪ್ರಮೋದ್ ಜಿ.ಕೃಷ್ಣನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪರಿಸರ ಅಭಿವೃದ್ಧಿ, ಕೋಷ್ಟಕ ಕಲ್ಯಾಣ) ಜಸ್ಟಿನ್ ಮೋಹನ್, ಸಲಹೆಗಾರ ಅಡ್ವ.ರಾಖಿ ರವಿಕುಮಾರ್, ಶಾಲಾ ಮುಖ್ಯೋಪಾಧ್ಯಾಯ ನಾಸರ್ ಅಳಕಲ್, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಡಾ.ಕಲೇಶ್ ಸದಾಶಿವನ್ ಮತ್ತು ಪಿಟಿಎ ಅಧ್ಯಕ್ಷ ಎ.ಲೆನಿನ್ ಶುಭಾಶಂಸನೆಗೈಯ್ಯುವರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ದಕ್ಷಿಣ ವೃತ್ತ) ಡಾ.ಆರ್.ಕಮಲಹಾರ ನೇತೃತ್ವ ನೀಡುವರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries