HEALTH TIPS

ಕೇರಳದಲ್ಲಿ ಬೀದಿ ನಾಯಿಗಳ ಹತ್ಯೆ ನಿಲ್ಲಬೇಕು; ದೆಹಲಿ ಮೂಲದ ಸಂಘಟನೆಯಿಂದ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ

              ನವದೆಹಲಿ: ಕೇರಳದಲ್ಲಿ ಬೀದಿ ನಾಯಿಗಳನ್ನು ಅನಿಯಂತ್ರಿತವಾಗಿ ಕೊಲ್ಲಲಾಗುತ್ತಿದ್ದು, ಇದನ್ನು ತಡೆಯಬೇಕು ಎಂದು ಆಗ್ರಹಿಸಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ.

               ದೆಹಲಿ ಮೂಲದ ನಾಯಿಗಳನ್ನು ರಕ್ಷಿಸುವ ಕ್ರಿಯೇಚರ್ಸ್ ಅಂಡ್ ಸ್ಮಾಲ್ ಎಂಬ ಸಂಸ್ಥೆ ಅರ್ಜಿಯೊಂದಿಗೆ ನ್ಯಾಯಾಲಯಕ್ಕೆ ಬಂದಿತ್ತು.

               ಕೇರಳದಲ್ಲಿ ಕೇವಲ 6,000 ನಾಯಿಗಳು ಮಾತ್ರ ಉಳಿದಿವೆ ಎಂದು ಅರ್ಜಿಯಲ್ಲಿ ಸಂಘಟನೆ ಆರೋಪಿಸಿದೆ. ರಾಜ್ಯ ಸರಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಅನಾಗರಿಕ ರೀತಿಯಲ್ಲಿ ನಾಯಿಗಳ ಹತ್ಯೆಯನ್ನು ತಡೆಯದೆ ಮೌನವಹಿಸಿವೆ. ನಾಯಿಗಳನ್ನು ಕೊಲ್ಲುವವರ ವಿರುದ್ಧ ಪ್ರಕರಣ ದಾಖಲಿಸಲು ಪೆÇಲೀಸರು ಸಿದ್ಧರಿಲ್ಲ.

          ಸುಪ್ರೀಂ ಕೋರ್ಟ್‍ನ ಆದೇಶಗಳಿಗೆ ಅವಿಧೇಯತೆ. ನಾಯಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಜುಲೈ 12 ರಂದು, ಹಿಂಸಾತ್ಮಕ ಬೀದಿನಾಯಿಗಳಿಗೆ ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿ ಕಣ್ಣೂರು ಜಿಲ್ಲಾ ಪಂಚಾಯತ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸುತ್ತಿದೆ. ಈ ದಿನವೇ ತಮ್ಮ ಅರ್ಜಿಯನ್ನು ಪರಿಗಣಿಸಬೇಕೆಂದು ಸಂಘಟನೆ ಬಯಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries