ಕಾಸರಗೋಡು: ಕೇರಳ ಪೋಲೀಸ್ ಅಧಿಕಾರಿಗಳ ಸಂಘದ ಕಾಸರಗೋಡು ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾಸರಗೋಡು ನಗರಠಾಣೆ ಇನ್ಸ್ಪೆಕ್ಟರ್ ಅಜಿತ್ ಕುಮಾರ್ ಜಿಲ್ಲಾಧ್ಯಕ್ಷ, ಚಂದೇರ ಠಾಣೆ ಎಎಸ್ಐ ಶ್ರೀದಾಸ್ ಎಂ.ವಿ ಉಪಾಧ್ಯಕ್ಷ. , ಕಾಸರಗೋಡು ಸೈಬರ್ ಪೊಲೀಸ್ ಠಾಣೆ ಎಸ್.ಐ ರವೀಂದ್ರನ್ ಮಡಿಕೈ ಕಾರ್ಯದರ್ಶಿ, ಡಿಸಿಆರ್ಬಿ ಎಸ್.ಐ ರಾಜೀವನ್ ಕೆ.ಪಿ ಜತೆಕಾರ್ಯದರ್ಶಿ, ವಿಎಸಿಬಿ ಎಎಸ್ಐ ಸುಭಾಷ್ ಚಂದ್ರನ್ ವಿ.ಟಿ ಕೋಶಾಧಿಕಾರಿ ಮತ್ತು ಕಾರ್ಯಕಾರಿ ಸದಸ್ಯರಾಗಿ ಉನ್ನಿಕೃಷ್ಣನ್ ವಿ, ಲೀಲಾ. ಕೆ, ಸದಾಶಿವನ್, ಸುರೇಶ್ ಮುರಿಕೋಲಿ, ರತೀಶನ್ ಏ ಮತ್ತು ಮಹೇಂದ್ರನ್ ನೀಲೇಶ್ವರಂ, ಸುರೇಶ್, ಜಿಲ್ಲಾ ಅಪರಾಧ ವಿಭಾಗದ ಆಡಿಟ್ ಸಮಿತಿ ಸದಸ್ಯರಾಗಿ ಸಂತೋಷ ಅವರನ್ನು ಆಯ್ಕೆ ಮಾಡಲಾಯಿತು.
ಡಿಎಚ್ಕ್ಯೂ ಸಮ್ಮೇಳನ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಹೊಸದುರ್ಗ ಠಾಣೆ ಎಸ್ಐ ಮಧುಸೂದನ್ ಚುನಾವಣಾಧಿಕಾರಿಯಾಗಿ ಸಹಕರಿಸಿದರು. ಟ್ರಾಫಿಕ್ ಠಾಣೆಯ ಗಿರೀಶ್ ಬಾಬು ಟಿ. ಮಂಡಿಸಿದ ಪ್ಯಾನಲನ್ನು ಸುರೇಂದ್ರನ್ ಮತ್ತು ಸುರೇಶ್ ಅನುಮೋದಿಸಿದರು. ಪ್ಯಾನೆಲನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು. ಎಸ್ಎಂಎಸ್ ಡಿವೈಎಸ್ ಪಿ ಸತೀಶ್ ಅಲಕ್ಕಲ್ ವೀಕ್ಷಕರಾಗಿ ಸಹಕರಿಸಿದರು.