HEALTH TIPS

ತಿರುವನಂತಪುರಂ ನಾಮಜಪಯಾತ್ರೆ ಪ್ರಕರಣ; ಮುಂದಿನ ವಿಚಾರಣೆಗೆ ಹೈಕೋರ್ಟ್ ತಡೆ

                 ಎರ್ನಾಕುಳಂ: ತಿರುವನಂತಪುರಂನಲ್ಲಿ ನಾಮಜಪಯಾತ್ರೆಯಲ್ಲಿ ಭಾಗವಹಿಸಿದ್ದವರ ವಿರುದ್ಧ ದಾಖಲಿಸಿರುವ ಪ್ರಕರಣದ ಮುಂದಿನ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

                ಮುಂದಿನ ನಾಲ್ಕು ವಾರಗಳವರೆಗೆ ತಡೆಯಾಜ್ಞೆ ಇರುತ್ತದೆ. ಎನ್‍ಎಸ್‍ಎಸ್ ಸಲ್ಲಿಸಿದ ಅರ್ಜಿಯನ್ನು ಆಧರಿಸಿ ನ್ಯಾಯಾಲಯದ ಕ್ರಮ ಕೈಗೊಂಡಿದೆ. 

                  ನಂಬಿಕೆ ಸಂರಕ್ಷಣಾ ದಿನದ ಅಂಗವಾಗಿ ತಿರುವನಂತಪುರಂ ಪಾಳಯಂನಿಂದ ಪಜವಂಗಡಿ ಗಣಪತಿ ದೇವಸ್ಥಾನದವರೆಗೆ ನಡೆದ ನಾಮಜಪಯಾತ್ರೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಎನ್‍ಎಸ್‍ಎಸ್ ಉಪಾಧ್ಯಕ್ಷ ಸಂಗೀತ್ ಕುಮಾರ್ ಮೊದಲ ಆರೋಪಿಯಾಗಿದ್ದು, ಕಂಟೋನ್ಮೆಂಟ್ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  1000 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

             ಕಾನೂನುಬಾಹಿರವಾಗಿ ಸಭೆ ನಡೆಸುವುದು ಪ್ರಮುಖ ಅಪರಾಧವಾಗಿದೆ. ಟ್ರಾಫಿಕ್‍ಗೆ ಅಡ್ಡಿಪಡಿಸಿದ ಆರೋಪ, ಅನುಮತಿಯಿಲ್ಲದೆ ಮೈಕ್ರೋಪೋನ್ ಸೆಟ್ ಬಳಕೆ ಮತ್ತು ಪೋಲೀಸರ ಸೂಚನೆಗಳನ್ನು ನಿರ್ಲಕ್ಷಿಸಿದ ಆರೋಪವನ್ನೂ ಹೊರಿಸಲಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries