HEALTH TIPS

ವೆಚ್ಚ ನಿಯಂತ್ರಿಸಲು ಉಪಕ್ರಮ: ಸರ್ಕಾರಿ ಸಂಸ್ಥೆಗಳಿಗೆ ಸೂಚನೆ ನೀಡಿದ ಹಣಕಾಸು ಇಲಾಖೆ

               ತಿರುವನಂತಪುರಂ: ವೆಚ್ಚ ತಗ್ಗಿಸಲು ಹಣಕಾಸು ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

                  ಇಲಾಖೆಯ ಕಾರ್ಯಕ್ರಮಗಳನ್ನು ನಡೆಸಲು ಪಂಚತಾರಾ ಹೋಟೆಲ್‍ಗಳ ಅಗತ್ಯವಿಲ್ಲ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಸೂಚನೆಗಳನ್ನು ಪಾಲಿಸದ ಅಧಿಕಾರಿಗಳಿಗೆ ದಂಡ ವಿಧಿಸಲಾಗುವುದು.

                  ರಾಜ್ಯ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಸÀರ್ಕಾರ ಮಿತವ್ಯಯಕ್ಕೆ ಮುಂದಾಗಿದೆ. ವೆಚ್ಚ ಕಡಿತಗೊಳಿಸುವಂತೆ ಹಣಕಾಸು ಇಲಾಖೆ ಇತರ ಇಲಾಖೆಗಳಿಗೆ ಸೂಚಿಸಿದೆ. ರಾಜ್ಯ ಸರ್ಕಾರಿ ಸಂಸ್ಥೆಗಳು, ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಅರೆ ಸರ್ಕಾರಿ ಸಂಸ್ಥೆಗಳು ತಮ್ಮ ವೆಚ್ಚವನ್ನು ಕಡಿಮೆ ಮಾಡಲು ಹಣಕಾಸು ಇಲಾಖೆ ಕೇಳಿದೆ. ವಿಚಾರ ಸಂಕಿರಣ, ಕಾರ್ಯಾಗಾರ, ತರಬೇತಿ ಕಾರ್ಯಕ್ರಮಗಳಿಗೆ ಪಂಚತಾರಾ ಹೊಟೇಲ್‍ಗಳನ್ನು ತಪ್ಪಿಸಬೇಕು ಮತ್ತು ಅದರ ಬದಲಾಗಿ ಇಲಾಖೆಯ ಇತರ ಸೌಲಭ್ಯಗಳನ್ನು ಸಾಧ್ಯವಾದಷ್ಟು ಬಳಸಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

                ಈ ನಿರ್ದೇಶನವನ್ನು ಉಲ್ಲಂಘಿಸಿದರೆ, ಅಧಿಕಾರಿಯ ವೇತನದಿಂದ ಹಣವನ್ನು ಬಡ್ಡಿಯೊಂದಿಗೆ ವಸೂಲಿ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಖಜಾನೆ ನಿಯಂತ್ರಣ ಹೇರಿರುವ ಸರ್ಕಾರ, 5 ಲಕ್ಷ ರೂ.ಗಿಂತ ಹೆಚ್ಚಿನ ಬಿಲ್ ಗಳನ್ನು ವಿನಿಮಯ ಮಾಡಿಕೊಳ್ಳಲು ಹಣಕಾಸು ಇಲಾಖೆಯಿಂದ ವಿಶೇಷ ಅನುಮತಿ ಪಡೆಯುವಂತೆ ಹೇಳಿದೆ. ಮೊದಲು 10 ಲಕ್ಷ ರೂ.ವರೆಗೆ ಈ ನಿಯಂತ್ರಣವಿತ್ತು. ಓಣಂ ಖರ್ಚಿನ ಹಣ ಖಜಾನೆಯಲ್ಲಿಯೇ ಇರುವಂತೆ ನಿಯಂತ್ರಣ ಹೇರಲಾಗಿದೆ ಎಂಬುದು ಹಣಕಾಸು ಇಲಾಖೆ ವಿವರಣೆ ನೀಡಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries