HEALTH TIPS

ಕಾಸರಗೋಡು ಸರ್ಕಾರಿ ಕಾಲೇಜು ಸಾಹಿತ್ಯ, ಸಾಂಸ್ಕøತಿಕ ವೇದಿಕೆ 'ಸ್ನೇಹ ರಂಗ'ಉದ್ಘಾಟನೆ

 

               ಕಾಸರಗೋಡು: ವಿದ್ಯಾನಗರ  ಸರ್ಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಾಹಿತ್ಯಿಕ, ಸಾಂಸ್ಕøತಿಕ ವೇದಿಕೆಯಾದ 'ಸ್ನೇಹರಂಗ'ದ ಉದ್ಘಾಟನೆ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ಜರಗಿತು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಮೊಹಮ್ಮದ್ ಅಲಿ ಸ್ನೇಹರಂಗದ ಉದ್ಘಾಟನೆ ನೆರವೇರಿಸಿದರು. 

             ಈ ಸಂದರ್ಭ ವಿದ್ಯಾರ್ಥಿಗಳ ಮಾಸಪತ್ರಿಕೆ ಕನ್ನಡ ಧ್ವನಿಯನ್ನು ಬಿಡುಗಡೆಗೊಳಿಸಲಾಯಿತು. ಮನಶಾಸ್ತ್ರಜ್ಞ ನವೀನ್ ಎಲ್ಲಂಗಳ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಮನೋರೋಗದ ಬಗ್ಗೆ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮ ನಡೆಯಿತು.

            ಕನ್ನಡ ವಿಭಾಗದ ಮುಖ್ಯಸ್ಥೆ  ಸುಜಾತಾ. ಎಸ್, ಸ್ನೇಹ ರಂಗದ ಅಧ್ಯಕ್ಷ ಲೋಹಿತ್. ಎ ಉಪಸ್ಥಿತರಿದ್ದರು. ಸ್ನೇಹರಂಗ ಮಾರ್ಗದರ್ಶಕಿ ಡಾ. ಆಶಾಲತಾ ಚೇವಾರ್   ಸ್ನೇಹರಂಗದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಪಲ್ಲವಿ .ಕೆ ಪ್ರಾರ್ಥಿನೆ ಹಾಡಿದರು.  ಶ್ಲೋಕಾ ಸ್ವಾಗತಿಸಿದರು. ಜಯಂತಿ ಕಾರ್ಯಕ್ರಮ ನಿರೂಪಿಸಿದರು.  ಅನನ್ಯಾ ಬಿ ವಂದಿಸಿದರು. ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries