ಮಧೂರು : ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇಗುಲದಲ್ಲಿ ದೇವಸ್ಥಾನ ತುಂಬಿಸುವ ಹಾಗೂ ನವಾನ್ನ ಕಾರ್ಯಕ್ರಮ ಬುಧವಾರ ಜರುಗಿತು.
ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ನೇತೃತ್ವ ವಹಿಸಿದ್ದರು. ಕ್ಷೇತ್ರದ ಪವಿತ್ರಪಾಣಿ ರತನ್ ಕುಮಾರ್ ಕಾಮಡ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಟಿ ಸಿ ಕೃಷ್ಣ ವರ್ಮ ರಾಜ, ಪ್ರದಾನ ಅರ್ಚಕರಾದ ವಿ ಶ್ರೀಕೃಷ್ಣ ಉಪಾಧ್ಯಾಯ, ಹಿರಿಯ ಅಧಿಕಾರಿ ಬಿ.ಎನ್ ಸುಬ್ರಹ್ಮಣ್ಯ, ವಕೀಲ ಅನಂತರಾಮ್, ಜಯದೇವ ಖಂಡಿಗೆ, ನಾರಾಯಣಯ್ಯ ಮಾಸ್ಟರ್ ಮೊದಲಾದ ಉಪಸ್ಥಿತರಿದ್ದರು.