ನವದೆಹಲಿ: ಹೊಸ ಬ್ಯಾಂಕ್ ಠೇವಣಿಗಳನ್ನು ಕ್ರೋಢೀಕರಿಸುವಲ್ಲಿ ಕೇರಳ ಹಿಂದುಳಿದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಮಾಡಿದೆ.
ಆರ್ಬಿಐನ ಸಂಶೋಧನೆಗಳು ಭಾರತದಲ್ಲಿನ ಬ್ಯಾಂಕ್ಗಳು ಒದಗಿಸಿದ ಅಂಕಿಅಂಶಗಳನ್ನು ಆಧರಿಸಿವೆ. ಯೋಜನೆಗಳ ಶಿಫಾರಸುಗಳು ಬ್ಯಾಂಕುಗಳಿಗೆ ತಲುಪುತ್ತವೆ ಮತ್ತು ಅವುಗಳ ಅನುಷ್ಠಾನಕ್ಕೆ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಬ್ಯಾಂಕ್ ನೆರವು ಪಡೆದಿರುವ ಯೋಜನೆಗಳ ಅಂಕಿ ಅಂಶಗಳ ಆಧಾರದ ಮೇಲೆ ಆರ್ ಬಿಐ ವರದಿ ಬಂದಿದೆ.
2022-23ರ ಅವಧಿಯಲ್ಲಿ ಭಾರತದಲ್ಲಿ ಹೂಡಿಕೆಗಳು ಗಣನೀಯವಾಗಿ ಹೆಚ್ಚಿವೆ ಎಂದು ವರದಿ ತೋರಿಸುತ್ತದೆ. ವಿವಿಧ ರಾಜ್ಯಗಳಲ್ಲಿ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಗಳು ಬಂದಿವೆ. ಯುಪಿ, ಮಹಾರಾಷ್ಟ್ರ, ಒಡಿಶಾ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಹೂಡಿಕೆಗಳನ್ನು ಮಾಡಲಾಗಿದೆ. ಈ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಬಂದಿರುವ ಮೂರು ರಾಜ್ಯಗಳಲ್ಲಿ ಕೇರಳವೂ ಒಂದು ಎಂದು ವರದಿ ಹೇಳಿದೆ.
ಕೇರಳ, ಗೋವಾ ಮತ್ತು ಅಸ್ಸಾಂ ರಾಜ್ಯಗಳು ಕಡಿಮೆ ಹೊಸ ಹೂಡಿಕೆಗಳನ್ನು ಹೊಂದಿವೆ. ಇದಲ್ಲದೆ, ಕೇರಳದಂತಹ ರಾಜ್ಯಗಳು ಸಣ್ಣ ಯೋಜನೆಗಳೊಂದಿಗೆ ಬರುತ್ತಿವೆ ಮತ್ತು ಹೂಡಿಕೆಯ ವಿಷಯದಲ್ಲಿ ಅವು ಹಿಂದುಳಿದಿವೆ ಎಂದು ಆರ್ಬಿಐ ಗಮನಸೆಳೆದಿದೆ. ಕೇರಳವು ಒಟ್ಟು ಹೂಡಿಕೆ ಯೋಜನೆಗಳಲ್ಲಿ ಶೇಕಡಾ 0.9ರಷ್ಟು (2,399 ಕೋಟಿ ರೂ.) ಪಡೆದಿದೆ.
ಈ ನಡುವೆ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. 16.2 ರಷ್ಟು (ರೂ. 43,180 ಕೋಟಿ) ಹೂಡಿಕೆ ಯೋಜನೆಗಳು ಯುಪಿಯಲ್ಲಿವೆ. ಗುಜರಾತ್ (ಶೇ 14), ಒಡಿಶಾ (ಶೇ 11.8), ಮಹಾರಾಷ್ಟ್ರ (ಶೇ 7.9) ಮತ್ತು ಕರ್ನಾಟಕ (ಶೇ 7.3) ಇತರ ರಾಜ್ಯಗಳಾಗಿವೆ. ವರದಿಯ ಪ್ರಕಾರ, 2014-15 ರಿಂದ ಭಾರತದಲ್ಲಿ 3,52,624 ಕೋಟಿ ರೂ.ಗಳ ದಾಖಲೆಯ ಬಂಡವಾಳ ಹೂಡಿಕೆಯಾಗಿದೆ. ಯೋಜನೆಗಳು ಬ್ಯಾಂಕ್ಗಳ ನೆರವು, ಖಾಸಗಿ ನಿಧಿ ಸಂಗ್ರಹ ಮತ್ತು ವಿದೇಶಿ ಸಾಲಗಳನ್ನು ಸಹ ಒಳಗೊಂಡಿವೆ. ಆರ್.ಬಿ.ಐ ಏಪ್ರಿಲ್ 2022 ರಲ್ಲಿ ರೆಪೆÇೀ ದರವನ್ನು ಹೆಚ್ಚಿಸಿತು, ಇದು ಹೊಸ ಠೇವಣಿಗಳ ಹೆಚ್ಚಳಕ್ಕೆ ಕಾರಣವಾಯಿತು.





