ತಿರುವನಂತಪುರಂ: ವಿಧಾನಸಭೆಯ ದೊಂಬಿ ಪ್ರಕರಣದ ಮುಂದಿನ ತನಿಖಾ ವರದಿಯನ್ನು ಕ್ರೈಂ ಬ್ರಾಂಚ್ ಸಲ್ಲಿಸಿದೆ. ಹೆಚ್ಚಿನ ಆರೋಪಿಗಳನ್ನು ಸೇರಿಸದೇ ವರದಿ ನೀಡಲಾಗಿದೆ.
ವಿ.ಶಿವಂಕುಟ್ಟಿ, ಇ.ಪಿಜಯರಾಜನ್ ಸೇರಿದಂತೆ ಆರು ಎಲ್ ಡಿಎಫ್ ನಾಯಕರು ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಹೆಚ್ಚಿನ ತನಿಖೆಯ ಭಾಗವಾಗಿ 11 ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.
ಸದನದಲ್ಲಿ ನಡೆದ ಘರ್ಷಣೆಯಲ್ಲಿ ಗಾಯಗೊಂಡಿದ್ದ ಮಹಿಳಾ ಶಾಸಕರ ಹೇಳಿಕೆಯನ್ನು ಪರಿಗಣಿಸಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗುವುದು ಎಂದು ಕ್ರೈಂ ಬ್ರಾಂಚ್ ನ್ಯಾಯಾಲಯಕ್ಕೆ ತಿಳಿಸಿದೆ. ಕ್ರೈಂ ಬ್ರಾಂಚ್ ತಿರುವನಂತಪುರಂ ಸಿಜೆಎಂ ಕೋರ್ಟ್ಗೆ ಮಾಹಿತಿ ನೀಡಿದ್ದು, ಮ್ಯೂಸಿಯಂ ಪೋಲೀಸರು ಪ್ರಕರಣ ದಾಖಲಿಸುವ ಪ್ರಕ್ರಿಯೆ ಮುಂದುವರೆಸಿದ್ದಾರೆ.


