HEALTH TIPS

ನೇತಾಜಿ ಫ್ರೆಂಡ್ಸ್ ಸರ್ಕಲ್ ಓಣಂ ಆಚರಣೆ

                  ಪೆರ್ಲ: ನೇತಾಜಿ ಫ್ರೆಂಡ್ಸ್ ಸರ್ಕಲ್ ಹಾಗೂ ನೇತಾಜಿ ಪಬ್ಲಿಕ್ ಲೈಬ್ರರಿ ಪೆರ್ಲ ಇದರ ಆಶ್ರಯದಲ್ಲಿ "ಓಣಂ 2023" ಓಣಂ ಆಚರಣೆ  ಜರಗಿತು.

          ಬೆಳಗ್ಗೆ 9 ಕ್ಕೆ ಮಕ್ಕಳಿಗೆ ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ  ಹೂವಿನ ರಂಗೋಲಿ ಸ್ಪರ್ಧೆ ಕೂಡ ಜರಗಿತು. ಇದರಲ್ಲಿ ಶೈನಿಂಗ್ ಸ್ಟಾರ್ ಬೆದ್ರಂಪಳ್ಳ ಪ್ರಥಮ ಸ್ಥಾನ ಪಡೆಯಿತು. ಮಧ್ಯಾಹ್ನ ಓಣಂ ಸದ್ಯ  ವಿತರಿಸಲಾಯಿತು.  ಸುಮಾರು ಮೂರು  ಸಾವಿರ ಮಂದಿ ಜಾತಿ  ಭೇದ ಮರೆತು ಜೊತೆಗೆ ಓಣಂ ಸದ್ಯ  ಸವಿದದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನಂತರ ಸಭಾ ಕಾರ್ಯಕ್ರಮ ಜರಗಿತು. 




            ಮಂಜೇಶ್ವರ ತಾಲ್ಲೂಕು ಲೈಬ್ರರಿ ಕೌನ್ಸಿಲ್ ಉಪಾಧ್ಯಕ್ಷ ಶ್ಯಾಮ್ ಭಟ್ ಉದ್ಘಾಟಿಸಿದರು. ಮಾತನಾಡಿದ ಅವರು, 3000 ಮಂದಿ ಓಣಂ ಸದ್ಯ ಸವಿದದ್ದು ಕೇರಳದಲ್ಲಿ ಮೊಟ್ಟಮೊದಲಾಗಿರಬಹುದು. ಅಲ್ಲದೆ ಜಾತಿಭೇದ ಮರೆತು ನಾವೆಲ್ಲರೂ ಒಟ್ಟಿಗೆ ಹಬ್ಬಗಳನ್ನು ಆಚರಿಸಿದಲ್ಲಿ ಈ ಕೇರಳ ಸುಂದರವಾಗಬಹುದು ಎಂದು  ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ  ಚಂದ್ರಹಾಸ ಶೆಟ್ಟಿ ವಹಿಸಿದ್ದರು. ಪೆರ್ಲ ಎಸ್.ಎನ್.ಎಚ್. ಶಾಲಾ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ, ನಿವೃತ್ತ  ಸಬ್ ರಿಜಿಸ್ಟರ್ ಮೊಹಮ್ಮದ್ ಆಲಿ ಪೆರ್ಲ, ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ಸುಧಾಕರ ಮಾಸ್ತರ್, ಪಬ್ಲಿಕ್ ಪ್ರಾಸಿಕ್ಯೂಟರ್ ಚಂದ್ರಮೋಹನ ಕಾಟುಕುಕ್ಕೆ ಶುಭ ಹಾರೈಸಿದರು. ಖ್ಯಾತ ಯಕ್ಷಗಾನ ಕಲಾವಿದ ಡಾ. ಸತೀಶ್ ಪುಣಿಚಿತ್ತಾಯ ಹಾಗೂ ಪ್ರಸಿದ್ಧ ಶಿಲ್ಪಿ ಚಂದ್ರಹಾಸ ಪೆರ್ಲ ಇವರಿಗೆ ಶಾಲು ಫಲ ಪುಷ್ಪ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 2023 ನೇ ಸಾಲಿನ ಎಸ್. ಎಲ್. ಸಿ ಉನ್ನತ ವಿಜಯಿಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೆ   ಕ್ಲಬ್ ನ ಕಾರ್ಯದರ್ಶಿ ಶ್ರೀರಾಜ್ ಸ್ವಾಗತಿಸಿ, ಕೋಶಾಧಿಕಾರಿ ರಾಜೇಶ್ ಬಿ ವಂದಿಸಿದರು. ಕ್ಲಬ್ ಸದಸ್ಯ ಸಂಜೀವ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ನ ಸದಸ್ಯರಿಂದ ವಿವಿಧ ವಿನೋದಾವಳಿಗಳು ಪ್ರದರ್ಶಿಸಲ್ಪಟ್ಟಿತು. ನಂತರ ರಾತ್ರಿ ವಿಶೇಷ ಆಕರ್ಷಣೆಯಾಗಿ  ಆಧೀನ ನಾಟಕ ನಾಟರಿವ್ ವೀಡು ಮಯ್ಯಿಲ್ ಕಣ್ಣೂರ್ ಇವರಿಂದ "ನಾಟ್ ಮೋಳಿ" ಜಾನಪದ ಹಾಡು ಮೇಳ ಜರಗಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries