ಬದಿಯಡ್ಕ: ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲ್ನಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ಸಂಸ್ಕøತ ದಿನಾಚರಣೆಯ ಹೈಸ್ಕೂಲು ವಿಭಾಗದ ಸಂಘಗಾನ ಸ್ಪ|ರ್ಧೆಯಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ ಪ್ರಥಮ ಸ್ಥಾನವನ್ನು ಗಳಿಸಿದೆ. ವಿದ್ಯಾರ್ಥಿಗಳಾದ ಧ|ರಣಿ ಎಸ್., ಸುಮೇಧಾ ಕೆ., ನಿಹಾರಿಕಾ, ಶ್ರೀಲಕ್ಷ್ಮೀ, ಸ್ಮøತಿ ಭಟ್, ಆರಾಧ್ಯಾ ರೈ ಹಾಗೂ ಪೂಜಶ್ರೀ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘ ಅಭಿನಂದನೆಯನ್ನು ಸಲ್ಲಿಸಿದೆ.

.jpg)
