HEALTH TIPS

ಅಡೂರಿನ ಕೆ ಎನ್ ಅಡಿಗರಿಗೆ ಯಶೋನಿಧಿ ಪ್ರಶಸ್ತಿ

                   

                  ಮುಳ್ಳೇರಿಯ: ಹಿರಿಯ ಕಾರ್ಯಕ್ರಮ ನಿರೂಪಕ,  ಸಂಘಟಕರಾದ ಅಡೂರಿನ ಡಾ. ಕೆ ಎನ್ ಅಡಿಗರಿಗೆ ಬೆಂಗಳೂರಿನ ಗಾನಧಾರೆ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಈ ವರ್ಷದ ಗಾನ ಸಾರ್ವಭೌಮ ಡಾ. ಪಿ ಬಿ ಶ್ರೀನಿವಾಸ್ ಯಶೋನಿಧಿ ಪ್ರಶಸ್ತಿಯನ್ನು ಶುಕ್ರವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿತರಿಸಲಾಯಿತು. 

            ಕೆ ಎನ್ ಅಡಿಗ ಅವರ ಸಂಘಟನೆ ಹಾಗೂ ನಿರೂಪಣೆಯ ಕ್ಷೇತ್ರದ ಅನುಪಮ ಸೇವೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ನಟ ಪ್ರಣಯರಾಜ ಡಾ.ಶ್ರೀನಾಥ್, ಚಲನಚಿತ್ರ ನಿರ್ದೇಶಕ ಎಚ್ ಆರ್ ಭಾರ್ಗವ, ಲಯನ್ ಡಿ ಪಿಲಿಪ್ಸ್‍ರಾಜ್, ಎಂ ವೆಂಕಟೇಶ್ ಶೇಷಾದ್ರಿ, ಗಾನಧಾರೆ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ಪಿ ಬಿ ಶ್ರೀನಿವಾಸ್ ಅವರಿಗೆ ಗೀತ ನಮನ ಸಲ್ಲಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries