HEALTH TIPS

ಉಳಿಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

                    ಮಧೂರು: ಉಳಿಯ ತರುಣ ಕಲಾವೃಂದ ಹಾಗೂ ಪರಕ್ಕಿಲ ಬಾಲಗೋಕುಲದ ಆಶ್ರಯದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಗ್ರಾಮಾಧಿಕಾರಿ ಸತ್ಯನಾರಾಯಣ ತಂತ್ರಿಯವರು ಶ್ರೀ ಕೃಷ್ಣನ ನೀಡಿದ ಸಂದೇಶಗಳ ಕುರಿತು ಮಾತನಾಡಿದರು.

              ಸುಕನ್ಯಾ ವಿಷ್ಣು ಆಸ್ರ, ಡಾ. ಪಲ್ಲವಿ ಕಿಶೋರ್ ಆಸ್ರ, ಹಿರಿಯ ಸದಸ್ಯ ಉಳಿಯ  ಬಾಲಕೃಷ್ಣ ಶುಭಹಾರೈಸಿದರು. ಪ್ರಭಾಕರ ಉಳಿಯ ಅಧ್ಯಕ್ಷತೆ ವಹಿಸಿದರು.

          ಗಣಪತಿ ಹೋಮದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಭಗವದ್ಗೀತೆಯ ಶ್ಲೋಕಗಳು,ಸಂಗೀತ ಕುರ್ಚಿ, ಮಡಕೆ ಒಡೆಯುವುದು, ಹಗ್ಗಜಗ್ಗಾಟ ಮೊದಲಾದ ಸ್ಪರ್ಧೆಗಳು ಜರುಗಿದವು. ಬಳಿಕ ಸ್ಪರ್ಧಾ ವಿಜೇತರಿಗೆ ಮತ್ತು  ಕಳೆದ ವರ್ಷ ಎಸ್ ಎಲ್ ಸಿ, ಪ್ಲಸ್.ಟು, ಪದವಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ದಿವ್ಯಾ ಗಟ್ಟಿ ಪರಕ್ಕಿಲ, ಅನಿತಕುಮಾರ್.ಯು, ಪದ್ಮರಾಜ, ವಿಠಲ ಗಟ್ಟಿ, ಸುರೇಶ್ ಯು.ಆರ್, ಸಂತೋಷ್ ಆರ್ ಗಟ್ಟಿ ಮೊದಲಾದವರು ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries