ಕಾಸರಗೋಡು: ಕೇರಳ ಪ್ರದೇಶ ಶಾಲಾ ಶಿಕ್ಷಕರ ಸಂಘ(ಕೆಪಿಎಸ್ಟಿಎ)ವು ಕಾಸರಗೋಡು ಮಹಿಳಾ ವೇದಿಕೆಯ ಆಶ್ರಯದಲ್ಲಿ ಒಂದು ದಿನದ ಮಹಿಳಾ ಸಮಾವೇಶ ಕಾಸರಗೋಡು ಸಹಕಾರಿ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು.
ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯೆ ಹಾಗೂ ಮಾಜಿ ಶಾಸಕಿ ಶಾನಿಮೋಲ್ ಉಸ್ಮಾನ್ ಸಮಾವೇಶ ಉದ್ಘಾಟಿಸಿದರು. ನಿಷ್ಕ್ರಿಯತೆಯಲ್ಲಿರುವ ರಾಜ್ಯ ಸರ್ಕಾರ ತನ್ನ ಏಳನೇ ವರ್ಷಕ್ಕೆ ಕಾಲಿಡುತ್ತಿದ್ದು, ಸಚಿವರ ಹೆಸರೂ ಸಾರ್ವಜನಿಕರಿಗೆ ತಿಳಿಯದ ಪರಿಸ್ಥಿತಿಯಿದೆ. ಜನರ ಬದುಕಿನ ಸಮಸ್ಯೆಗಳ ಬಗ್ಗೆ ನಿರಾಸಕ್ತಿ ತೋರುತ್ತಿರುವ ಆಡಳಿತವನ್ನು ಕಿತ್ತೊಗೆಯುವ ಕಾಲ ಬಂದೊದಗಿದೆ ಎಂದು ತಿಳಿಸಿದರು.
ವನಿತಾ ಫೆÇೀರಂ ಅಧ್ಯಕ್ಷ ಎಂ.ಎ. ಮುಮ್ತಾಜ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಎಸ್ಟಿಎ ರಾಜ್ಯ ಕಾರ್ಯದರ್ಶಿ ಜಿ.ಕೆ.ಗಿರಿಜಾ ಪ್ರಧಾನ ಭಾಷಣ ಮಾಡಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ.ಶಶಿಧರನ್, ಕೆ. ಅನಿಲ್ ಕುಮಾರ್, ಜಿ.ಕೆ.ಗಿರೀಶ್, ಅಧ್ಯಕ್ಷ ಪ್ರಶಾಂತ್ ಕಾನತ್ತೂರು, ಜಿಲ್ಲಾ ಕಾರ್ಯದರ್ಶಿ ಕೆ. ಶ್ರೀನಿವಾಸನ್,ಕೆ.ವಿ ವಾಸುದೇವನ್, ಅಶೋಕನ್ ಕೋಟೋತ್, ಪಿ.ಟಿ. ಬೆನ್ನಿ ಎ.ಶೋಭನಾ, ಪಿ.ಚಂದ್ರಮತಿ, ಸ್ವಪ್ನಾ ಜಾರ್ಜ್, ಪಿ. ಜಲಜಾಕ್ಷಿ ಅವರು ಉಪಸ್ಥಿತರಿದ್ದರು. ನಂತರ ರಾಜೇಶ ಕೂಟಕಣಿ ನೇತೃತ್ವದಲ್ಲಿ ಪ್ರೇರಣಾ ತರಗತಿ ನಡೆಯಿತು. ಎಂ.ಕೆ.ಪ್ರಿಯಾ, ಅಜಿತಾ ಸಿ.ಕೆ., ವಿ.ಕೆ.ಪ್ರಭಾವತಿ, ಕೃಷ್ಣ ಸಿ.ಪಿ.ಕೆ., ಪಿ.ಶ್ರೀಜಾ, ಬಿಂದು ಎ.ವಿ., ಸೌಮ್ಯಾ ಕುಳೂರು, ಟಿ.ಜಿ.ದೇವಸ್ಯ, ರಜಿನಿ ಕೆ.ಜೋಸೆಫ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.