HEALTH TIPS

ಕೊಲೆ ಪ್ರಕರಣದ ಆರೋಪಿಯ ಖುಲಾಸೆ: ದುಭಾಷಿಯ ನೆರವಿನಿಂದ ಮಲಯಾಳಂ ಭಾಷೆಗೆ ಪರಿವರ್ತನೆಗೊಂಡ ಬಂಗಾಳದ ಮೂಲದವರ ಹೇಳಿಕೆ ಸಾಕ್ಷಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದ ಹೈಕೋರ್ಟ್!

              ಕೊಚ್ಚಿ: ಕೊಲೆ ಪ್ರಕರಣದ ಆರೋಪಿಯಾದ ಬೆಂಗಾಲಿ ನಿವಾಸಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿ ಆರೋಪಿಯನ್ನು ಬಿಡುಗಡೆಗೊಳಿಸಿದ್ದು, ದುಭಾಷಿಯ ಸಹಾಯದಿಂದ ಮಲಯಾಳಂ ಭಾಷೆಯಲ್ಲಿ ದಾಖಲಾದ ಹೇಳಿಕೆಯನ್ನು ಸಾಕ್ಷಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

             ಮೇಲ್ಮನವಿಯಲ್ಲಿ, ಬಂಗಾಳ ಮೂಲದ ಪ್ರದೀಪ್ ರಾಯ್ ಗೆ ಹತ್ಯೆ ಪ್ರಕರಣದಲ್ಲಿ ತ್ರಿಶೂರ್ ಹೆಚ್ಚುವರಿ ಸೆಷÀನ್ಸ್ ನ್ಯಾಯಾಲಯವು ಅವರಿಗೆ ಜೈಲು ಶಿಕ್ಷೆ ವಿಧಿಸಿತ್ತು. ನ್ಯಾಯಮೂರ್ತಿ ಸುರೇಶ್ ಕುಮಾರ್, ನ್ಯಾಯಮೂರ್ತಿ ಪಿ.ಜಿ. ಅಜಿತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪನ್ನು ವಜಾಗೊಳಿಸಿದೆ. ವಿಚಾರಣೆ ವೇಳೆ ದುಭಾಷಿಯನ್ನು ಪರೀಕ್ಷಿಸದಿರುವ ಅಂಶವನ್ನೂ ವಿಭಾಗೀಯ ಪೀಠ ಗಣನೆಗೆ ತೆಗೆದುಕೊಂಡಿದೆ.

            2012ರ ಮಾರ್ಚ್ 11ರಂದು ಕುನ್ನಂಕುಳಂನ ಅಲಿಂತೈ ಎಂಬಲ್ಲಿ ಹಾಲೋಬ್ರಿಕ್ಸ್ ಉದ್ಯೋಗಿ ಪ್ರದೀಪ್ ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರದೀಪ್‍ನ ಪರಿಚಯಸ್ಥ ಸನತ್ ರಾಯ್ ಹಣ ವಸೂಲಿ ಮಾಡಲು ಕೊಲೆ ಮಾಡಿದ್ದಾನೆ ಎಂದು ಪೆÇಲೀಸರು ಪತ್ತೆ ಹಚ್ಚಿದ್ದರು. ಆತನ ಬಳಿಯಿದ್ದ ವಾಲೆಟ್, ಮೊಬೈಲ್ ಫೆÇೀನ್, ಕೊಲೆಗೆ ಬಳಸಿದ ಆಯುಧ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಸನತ್ ಕೂಡ ಪ್ರದೀಪ್ ನನ್ನು ಕೊಂದಿರುವುದಾಗಿ ಹೇಳಿದ್ದಾನೆ.

        ಬಂಗಾಳಿ ಬಲ್ಲ ಸಿವಿಲ್ ಪೋಲೀಸ್ ಅಧಿಕಾರಿಯೊಬ್ಬರ ಸಹಾಯದಿಂದ ವಿಚಾರಣೆ ನಡೆಸಲಾಯಿತು. ಸನತ್ ರಾಯ್ ನೀಡಿದ ಹೇಳಿಕೆಯನ್ನು ಈ ಅಧಿಕಾರಿ ಮಲಯಾಳಂ ಭಾಷೆಗೆ ಅನುವಾದಿಸಿದ್ದಾರೆ. ಪ್ರತ್ಯಕ್ಷದರ್ಶಿಗಳಿಲ್ಲದ ಪ್ರಕರಣದಲ್ಲಿ ತ್ರಿಶೂರ್ ಅಡಿ ಈ ಹೇಳಿಕೆಯನ್ನು ಗಣನೆಗೆ ತೆಗೆದುಕೊಂಡರು. ಸೆಷನ್ಸ್ ಕೋರ್ಟ್ 2018 ರಲ್ಲಿ ಶಿಕ್ಷೆ ವಿಧಿಸಿತು.

        ಆದರೆ, ಆರೋಪಿಯ ಹೇಳಿಕೆಯ ಭಾಷಾಂತರ ಮತ್ತು ಮಲಯಾಳಂ ಭಾಷೆಯಲ್ಲಿ ದಾಖಲಾಗಿರುವುದು ಸಾಕ್ಷ್ಯ ಕಾಯ್ದೆಯಡಿ ಸ್ವೀಕಾರಾರ್ಹವಲ್ಲ ಎಂದು ಮೇಲ್ಮನವಿಯಲ್ಲಿ ವಾದಿಸಲಾಗಿತ್ತು. ಇದನ್ನು ಒಪ್ಪಿಕೊಂಡ ಹೈಕೋರ್ಟ್ ಆರೋಪಿಯನ್ನು ಖುಲಾಸೆಗೊಳಿಸಿತು.


 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries