HEALTH TIPS

ಕರುವನ್ನೂರು; ಹೂಡಿಕೆದಾರರಿಗೆ ತ್ವರಿತವಾಗಿ ಹಣ ವಾಪಸ್ ಪಡೆಯಲು ಕ್ರಮ: ಸಚಿವ ವಿ.ಎನ್.ವಾಸವನ್

                 ಕೊಚ್ಚಿ: ಕರುವನ್ನೂರು ಸಹಕಾರಿ ಬ್ಯಾಂಕ್ ನ ಹೂಡಿಕೆದಾರರಿಗೆ ಆದಷ್ಟು ಬೇಗ ಹಣ ವಾಪಸ್ ಪಡೆಯಲು ಕ್ರಮಕೈಗೊಳ್ಳಲಾಗಿದ್ದು, ಐವತ್ತು ಸಾವಿರದವರೆಗಿನ ಠೇವಣಿ ಹಣವನ್ನು ಪೂರ್ಣವಾಗಿ ಪಾವತಿಸಲಾಗುವುದು ಎಂದು ಸಚಿವ ವಿ.ಎನ್.ವಾಸವನ್ ತಿಳಿಸಿದ್ದಾರೆ. ಹೂಡಿಕೆದಾರರು ಒಂದೇ ಒಂದು ರೂಪಾಯಿ ಕಳೆದುಕೊಳ್ಳುವುದಿಲ್ಲ ಎಂದಿರುವರು.

                     ಇಡಿ ತನಿಖೆ ರಾಜಕೀಯ ಪ್ರೇರಿತವಾಗಿದ್ದು, ಹೂಡಿಕೆದಾರರಿಂದ ಹಣ ವಸೂಲಿ ಮಾಡಲು ಮುಂದಾಗಿದೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ಪುನರುಚ್ಚರಿಸಿದರು.

                      ಕರುವನ್ನೂರಿನಲ್ಲಿ ಕೇರಳ ಬ್ಯಾಂಕ್ ನ ಅಧಿಕಾರಿಯೊಬ್ಬರಿಗೆ ಪ್ರಭಾರ ನೀಡಲಾಗುವುದು ಎಂದು ವಿ.ಎನ್.ವಾಸವನ್ ತಿಳಿಸಿದರು. 73 ಕೋಟಿ ಹೂಡಿಕೆದಾರರಿಗೆ ಮರಳಿದೆ. ಕೇರಳ ಬ್ಯಾಂಕ್‍ನಿಂದ ಪಡೆಯಬೇಕಾದ ಹನ್ನೆರಡು ಕೋಟಿ ಠೇವಣಿ ಹಣವನ್ನು ಕರುವನ್ನೂರ್ ಬ್ಯಾಂಕ್‍ಗೆ ನೀಡಲಾಗುತ್ತದೆ.

                     2011ರಿಂದ ಕರುವನ್ನೂರಿನಲ್ಲಿ ಅವ್ಯವಸ್ಥೆ ಇದೆ. ಮೊದಲ ದೂರನ್ನು 2019 ರಲ್ಲಿ ಸ್ವೀಕರಿಸಲಾಗಿದೆ. ಅಕ್ರಮಗಳ ಕುರಿತು ಈಗಾಗಲೇ ಹದಿನೆಂಟು ಎಫ್‍ಐಆರ್‍ಗಳು ದಾಖಲಾಗಿವೆ. ಕರುವನ್ನೂರಿನಲ್ಲಿರುವ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸಬಹುದು ಎಂದರು.

                ಪ್ರಸ್ತುತ ಪ್ರಕಟಣೆಗಳು ಆರ್‍ಬಿಐ ನಿಯಮಗಳಿಂದ ನಿರ್ಬಂಧಿಸಲ್ಪಟ್ಟಿಲ್ಲ. ಸಹಕಾರಿ ಬ್ಯಾಂಕ್‍ಗಳಲ್ಲಿ ವಾರಕ್ಕೊಮ್ಮೆ ಲೆಕ್ಕ ಪರಿಶೋಧನೆ ಇರುತ್ತದೆ. ಇಡಿ ಹಸ್ತಕ್ಷೇಪದಿಂದ ವಹಿವಾಟು ಸ್ಥಗಿತಗೊಂಡಿದೆ ಎಂದು ಸಚಿವ ವಾಸವನ್ ಹೇಳಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries