HEALTH TIPS

ಕೊಂಡೆವೂರು ಮಠದ ನವರಾತ್ರಿ ಮಹೋತ್ಸವ ಸಂಪನ್ನ

                ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಅ.15 ರಂದು ಆರಂಭಗೊಂಡ ನವರಾತ್ರಿ ಮಹೋತ್ಸವ ಮಂಗಳವಾರ (ಅ.24) ವಿಜಯದಶಮಿಯಂದು ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ,  ವೇದಮೂರ್ತಿ ಹರಿನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ವಿವಿಧ ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಪ್ರಾತ:ಕಾಲದಲ್ಲಿ ಶ್ರೀದೇವರಿಗೆ 108 ಸೀಯಾಳಾಭಿಷೇಕ, ನಂತರ ವಿದ್ಯಾರಂಭ ನಡೆದು ತೆನೆಪೂಜೆಯ ಬಳಿಕ ತೆನೆ ತುಂಬಿಸಲಾಯಿತು. 


        ಮಂಗಳವಾರ ಬೆಳಿಗ್ಗೆ 10.ರಿಂದ ಸವಿಜೀವನಂ ನೃತ್ಯ ಕಲಾಕ್ಷೇತ್ರ ಕೊಂಡೆವೂರು ಇದರ ವಿದ್ಯಾರ್ಥಿಗಳಿಂದ ವಿದುಷಿ ಸವಿತಾಜೀವನ್ ನಿರ್ದೇಶನದಲ್ಲಿ ಭರತನಾಟ್ಯ ಕಾರ್ಯಕ್ರಮ ವೈವಿಧ್ಯ ಪ್ರದರ್ಶನಗೊಂಡಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಶ್ರೀಗಳವರು ಭಕ್ತಾದಿಗಳಿಗೆ ಮಂಗಲಮಂತ್ರಾಕ್ಷತೆ ಅನುಗ್ರಹಿಸುವುದರೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಂಡಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries