HEALTH TIPS

ಆಯರ್ಕಾಡ್ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಆಮಂತ್ರಣ ಪತ್ರಿಕೆ ಬಿಡುಗಡೆ: 36ನೇ ವಾರ್ಷಿಕೋತ್ಸವ, ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವ

              ಮುಳ್ಳೇರಿಯ: ಗೌರಿಯಡ್ಕ ಆಯರ್ಕಾಡ್ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ 36ನೇ ವಾರ್ಷಿಕೋತ್ಸವ ಹಾಗೂ ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ವಿಜಯದಶಮಿಯಂದು ಶ್ರೀಮಂದಿರದಲ್ಲಿ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರ ಆಶೀರ್ವಾದಗಳೊಂದಿಗೆ ಮಂದಿರದ ಗುರುಸ್ವಾಮಿ ರವೀಂದ್ರನ್ ಆಯರ್ಕಾಡ್ ಅಯ್ಯಪ್ಪಸ್ವಾಮಿಗೆ ಪೂಜೆ ಸಲ್ಲಿಸಿದರು. ವಿವಿಧ ಮಂದಿರಗಳ ಗುರುಸ್ವಾಮಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವದ ಗೌರವಾಧ್ಯಕ್ಷ ರಘುರಾಮ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. 

          ತಂಬಾನ್ ಮಾಸ್ತರ್ ಆಯರ್ಕಾಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನಿತ್ಯಾನಂದ ಶೆಣೈ ಬದಿಯಡ್ಕ, ಶಂಕರನಾರಾಯಣ ಮಯ್ಯ ಬದಿಯಡ್ಕ, ಡಾ. ವಿ.ವಿ. ರಮಣ ಮುಳ್ಳೇರಿಯ, ನಾರಾಯಣ ಪೂಜಾರಿ ಬಂಬ್ರಾಣ ಕೊಟ್ಯದಮನೆ, ಗಣೇಶ ವತ್ಸ ಮುಳ್ಳೆರಿಯಾ, ಉದ್ಯಮಿ ರಂಗನಾಥ್ ರಾವ್ ಮುಳ್ಳೇರಿಯ, ಶಶಿಧರನ್ ಸುಮಂಗಲಿ ಮುಳ್ಳೇರಿಯ, ವಿನೋದ್ ಕುಮಾರ್ ಸೆಂಚುರಿ, ಕಲಾ ಮಾಧವನ್ ನಾಯರ್ ಅಯರ್ಕಾಡ್, ಪ್ರಸಾದ್ ಜ್ಯೋತಿಷ್ಯರು ಗೌರಿಯಡ್ಕ, ಐತಪ್ಪ ಮವ್ವಾರ್, ಸುಕುರಾಮನ್ ನಾಯರ್, ಜಗದೀಶ್ ರಾವ್ ಪೈಕಾನ, ವಿಜಯನ್ ಬಾಜಿರ್ತೊಟ್ಟಿ, ಕುಂಞರಾಮನ್ ಗುರುಸ್ವಾಮಿ ಪಾರ್ತಕೊಚ್ಚಿ, ಚಂದ್ರನ್ ಗುರುಸ್ವಾಮಿ ನಾಟೇಕಲ್, ಗೋಪಾಲನ್ ನಾಯರ್ ಮಂಗಳೂರು, ಸುಬ್ಬರಾವ್ ಕೋಳಿಕ್ಕಜೆ, ರವೀಂದ್ರನ್ ಆಯಾರ್ಕಾಡ್ ದೇವರಾಜ್ ಕೋಳಿಕ್ಕಜೆ ಮುಂತಾದವರು ಉಪಸ್ಥಿತರಿದ್ದರು. ಕುಮಾರಿ ಅಕ್ಷಿತ ಕೋಳಿಕ್ಕಜೆ ಪ್ರಾರ್ಥನೆ ಹಾಡಿದರು. ಚಂದ್ರನ್ ಕೋಳಿಕ್ಕಜೆ ಸ್ವಾಗತಿಸಿ,ಗೋಪಾಲಕೃಷ್ಣ ಮುಂಡೋಳುಮೂಲೆ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries