HEALTH TIPS

ಮಂಜೇಶ್ವರ ಉಪಜಿಲ್ಲಾ ಕಲೋತ್ಸವ ನ.7 ರಿಂದ ಧರ್ಮತ್ತಡ್ಕದಲ್ಲಿ: ಸಿದ್ದತೆಗಳು ಪೂರ್ಣ

                    ಉಪ್ಪಳ:  ಮಂಜೇಶ್ವರ ಉಪಜಿಲ್ಲಾ  ಶಾಲಾ 62ನೇ ಕಲೋತ್ಸವವು ನವಂಬರ್ 7 ರಿಂದ 10 ರ ತನಕ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ಜರಗಲಿದೆ ಎಂದು ಸಂಘಟನಾ ಸಮಿತಿ ಶುಕ್ರವಾರ ಐಲ ಶಾರದಾ ಬೋವೀಸ್ ಶಾಲೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಮಗ್ರ ಮಾಹಿತಿ ನೀಡಿದರು.

             ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ  ಜಿತೇಂದ್ರ  ಮಾತನಾಡಿ " ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನಡೆಯಲಿರುವ ಈ  ಉತ್ಸವದ ಪೂರ್ವಸಿದ್ಧತೆಗಳು ಭರದಿಂದ ಸಾಗುತ್ತಿದೆ,ನಗರ ಪ್ರದೇಶದಿಂದ ದೂರವಿರುವ ಈ ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮವು  ಯಶಸ್ವಿಗೊಳ್ಳುವಲ್ಲಿ  ಎಲ್ಲರೂ ಯಥಾಸಾಧ್ಯ  ತನು, ಮನ ಧನಗಳ ಸಹಕಾರವನ್ನು ಇತ್ತು ಸಹಕರಿಸಬೇಕೆಂದು" ವಿನಂತಿಸಿದರು.

              ಜನರಲ್ ಕನ್ವೀನರ್  ರಾಮಚಂದ್ರ ಭಟ್ ಮಾತನಾಡಿ " 120 ಕ್ಕೂ ಅಧಿಕ ಶಾಲೆಗಳಿಂದ 4000 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು 25 ವೇದಿಕೆಗಳಲ್ಲಿ ತಮ್ಮ ಪ್ರತಿಭಾಪ್ರದರ್ಶನವನ್ನು ಗೈಯಲಿದ್ದಾರೆ. ಸಂಸದರು, ಶಾಸಕರು ಮೊದಲ್ಗೊಂಡು ಅನೇಕ ಗಣ್ಯರು ಭಾಗವಹಿಸುವ ಈ ಉತ್ಸವವನ್ನು ವಿಜಯಗೊಳಿಸಿ ಅವಿಸ್ಮರಣೀಯಗೊಳಿಸಬೇಕೆಂದು" ಕರೆನೀಡಿದರು. ಈ ಸಂದರ್ಭ  ವ್ಯವಸ್ಥಾಪಕ  ಶಂಕರನಾರಾಯಣ ಭಟ್, ಹೈಸ್ಕೂಲ್ ಮುಖ್ಯೋಪಾಧ್ಯಾಯ ಗೋವಿಂದ ಭಟ್ ,ಯು.ಪಿ ಮುಖ್ಯೋಪಾಧ್ಯಾಯ  ಮಹಾಲಿಂಗ ಭಟ್,  ಐಲ ಬೋವೀಸ್ ಶಾಲೆಯ ಮುಖ್ಯ ಶಿಕ್ಷಕಿ  ಜಲಜಾಕ್ಷಿ ಎ, ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಪೆÇ್ರೀಗ್ರಾಂ ಕನ್ವೀನರ್ ಸತೀಶ್ ಕುಮಾರ್  ಶೆಟ್ಟಿ, ಫೈನಾನ್ಸ್ ಕನ್ವೀನರ್ ರಾಮಮೋಹನ್  ,ಪ್ರಚಾರ ಸಮಿತಿ ಕನ್ವೀನರ್ ಪ್ರದೀಪ್ ಕೆ ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries