HEALTH TIPS

ಅಯ್ಯಪ್ಪ ಸ್ವಾಮಿಗೆ ಸಮರ್ಪಣೆಗೊಂಡ ಕಳಭ ಪೂಜೆ: ಗರ್ಭಗೃಹ ಮುಚ್ಚಿದರೂ ಯಾತ್ರಾರ್ಥಿಗಳಿಗೆ ಮೆಟ್ಟಿಲೇರಲು ಅವಕಾಶ

                     ಶಬರಿಮಲೆ: ಶಬರಿಮಲೆಯಲ್ಲಿ ಕಳಾಭಿಷೇಕ ಭಕ್ತಿ ಭಾವದಿಂದ ನಡೆಯಿತು. ಉಷಪೂಜೆ ನಂತರ ಪೂರ್ವ ಮಂಟಪದಲ್ಲಿ ಕಳಭ ಪೂಜೆ ನಡೆಯಿತು.

              11 ಗಂಟೆಯ ನಂತರ ತುಪ್ಪದ ಅಭಿμÉೀಕ ನೆರವೇರಿತು. ಮಧ್ಯಾಹ್ನ ಕಲಭಾಭಿಷೇಕ ನಡೆಯಿತು. ಮೇಲ್ಶಾಂತಿ ಪಿ.ಎನ್.ಮಹೇಶ್ ಅವರು ತಂತ್ರಿಗಳ ಒಪ್ಪಿಗೆ ಪಡೆದು ಬ್ರಹ್ಮಕಲಶ ನಿರ್ವಹಿಸಿದರು. ಸಂಗೀತ ವಾದ್ಯಗಳ ಸಂಭ್ರಮಾಚರಣೆಯೊಂದಿಗೆ ಕಲಶಗÀಳನ್ನು ದೇಗುಲಕ್ಕೆ ತರಲಾಯಿತು. ಅಯ್ಯಪ್ಪ ಮೂರ್ತಿಗೆ ತಂತ್ರಿ ಕಂಠಾರರ್ ಮಹೇಶ್ ಮೋಹನರ್ ಕಲಭಾಭಿಷೇಕ ನೆರವೇರಿಸಿದರೆ, ಭಕ್ತರು ಪುನೀತರಾದರು. ಮಧ್ಯಾಹ್ನ 18ನೇ ಮೆಟ್ಟಿಲು ಏರಿದ ಭಕ್ತರಿಗೆ ಕಲಭಾಭಿಷೇಕ ಹಾಗೂ ಪೂಜೆ ಸಲ್ಲಿಸುವ ಅವಕಾಶ ದೊರೆಯಿತು.

            ಶಬರಿಮಲೆ ದೇವಸ್ಥಾನ 16 ಗಂಟೆಗಳ ಕಾಲ ತೆರೆದಿರುತ್ತದೆ. ಜನಸಂದಣಿ ಕಡಿಮೆ ಮಾಡಲು ರಾತ್ರಿ ವೇಳೆ ಗರ್ಭಗೃಹ ಮುಚ್ಚಿದರೂ ಯಾತ್ರಾರ್ಥಿಗಳಿಗೆ 18ನೇ ಮೆಟ್ಟಿಲು ಹತ್ತಲು ಅವಕಾಶ ಕಲ್ಪಿಸಲಾಗಿದೆ. ಬೆಳಗಿನ ಜಾವ 3 ಗಂಟೆಗೆ ತೆರೆದರೆ ಮಧ್ಯಾಹ್ನದ ಪೂಜೆಯ ನಂತರ ಒಂದು ಗಂಟೆ ಮುಚ್ಚಲಾಗುತ್ತದೆ. ಮತ್ತೆ ಸಂಜೆ 4 ಗಂಟೆಗೆ ತೆರೆಯಲಿದೆ. ರಾತ್ರಿ 11 ಗಂಟೆಗೆ ಹರಿವರಾಸನವನ್ನು ಪಠಿನದ ನಂತರ ಮುಚ್ಚುಗಡೆವರೆಗೂ ದರ್ಶನವನ್ನು ಮಾಡಬಹುದು.

             ದರ್ಶನ ಸಮಯ ವಿಸ್ತರಣೆಯಾಗಿರುವುದರಿಂದ ಯಾತ್ರಾರ್ಥಿಗಳು ನಿರಾಳರಾಗಿದ್ದಾರೆ. ಬೆಳಗಿನ ಜಾವ 3 ಗಂಟೆಗೆ ರಸ್ತೆ ತೆರೆಯುವುದರಿಂದ ಯಾತ್ರಾರ್ಥಿಗಳು ಹೆಚ್ಚು ಹೊತ್ತು ಕಾಯದೆ ದರ್ಶನ ಪಡೆಯುವ ಅವಕಾಶ ದೊರೆಯುತ್ತದೆ. ಮಾಸ ಪೂಜೆ ವೇಳೆ ಬೆಳಗ್ಗೆ 5ಕ್ಕೆ ತೆರೆದು ರಾತ್ರಿ 10ಕ್ಕೆ ಮುಚ್ಚುತ್ತದೆ. ಬೆಳಗಿನ ಜಾವ ಮೂರಕ್ಕೆ ರಸ್ತೆ ಗರ್ಭಗೃಹ  ತೆರೆಯುವುದರಿಂದ ಬೇಗನೇ ದರ್ಶನ, ಅಭಿಷೇಕ ಮಾಡಿ ಪ್ರಸಾದ ಖರೀದಿಸಿ ನಾಲ್ಕು ಗಂಟೆಗೆ ಬೆಟ್ಟ ಇಳಿದು ಬರುವವರಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries