HEALTH TIPS

ಮರ್ಯಾದೆ ಪ್ರಶ್ನೆ: ಎರಡು ವಾರಗಳಲ್ಲಿ ಕಲ್ಯಾಣ ಪಿಂಚಣಿ ಪಾವತಿಸಲು ಹಣಕಾಸು ಇಲಾಖೆಯಿಂದ ಪ್ರಯತ್ನ

                  ತಿರುವನಂತಪುರಂ: ಕೇರಳೀಯಂ ಉತ್ಸವಕ್ಕೆ ಕೋಟ್ಯಂತರ ರೂ.ಗಳ ಖರ್ಚು ಮಾಡುತ್ತಿರುವ ಮಧ್ಯೆ ಸರ್ಕಾರದ ವಿರುದ್ಧ ಹಲವು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡು ವಾರಗಳಲ್ಲಿ ಕಲ್ಯಾಣ ಪಿಂಚಣಿಯ ಕಂತುಗಳನ್ನು ಪಾವತಿಸಲು ಹಣಕಾಸು ಇಲಾಖೆ ಮುಂದಾಗಿದೆ.

               ಕಲ್ಯಾಣ ಪಿಂಚಣಿಯನ್ನು ಎರಡು ಕಂತುಗಳಲ್ಲಿ ವಿತರಿಸಲು ಸರ್ಕಾರ ಯೋಜಿಸಿದೆ. ನವಕೇರಳ ಜನಸಾಧನೆಗಳಿಗೆ ಮುಖ್ಯಮಂತ್ರಿ ಹಾಗೂ ಇತರೆ ಸಚಿವರು ತೆರಳುವ  ಮುನ್ನವೇ ಕಂತುಗಳನ್ನು ಹಂಚುವ ಮೂಲಕ ಮುಖ ಉಳಿಸಿಕೊಳ್ಳುವ ಹುನ್ನಾರದಲ್ಲಿ ಸರ್ಕಾರವಿದೆ.

             ಇದೇ ವೇಳೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ನಾಲ್ಕು ತಿಂಗಳ ಬಾಕಿಯನ್ನು ಪಾವತಿಸಬೇಕಿದೆ. ಈ ಪೈಕಿ ಎರಡು ತಿಂಗಳ ಪಿಂಚಣಿ ವಿತರಣೆಗೆ ಸರ್ಕಾರ 2000 ಕೋಟಿ ರೂ.ಬೇಕಾಗುತ್ತದೆ. ಡಿಸೆಂಬರ್ ವರೆಗೆ ರಾಜ್ಯಕ್ಕೆ ಮಂಜೂರಾದ ಸಾಲದಲ್ಲಿ ಕೇವಲ 52 ಕೋಟಿ ರೂಪಾಯಿ ಮಾತ್ರ ಉಳಿದಿರುವ ಪರಿಸ್ಥಿತಿಯಲ್ಲಿ ಕಲ್ಯಾಣ ಪಿಂಚಣಿಯ ಎರಡು ಕಂತುಗಳನ್ನು ಪಾವತಿಸುವುದಾಗಿ ಸರ್ಕಾರ ಹೇಳುತ್ತದೆ. ಸಹಕಾರಿ ಮಹಾಮಂಡಳದಿಂದ ಹಣ ವಸೂಲಿ ಮಾಡುವ ಪ್ರಯತ್ನ ನಡೆದರೂ ಸಫಲವಾಗಲಿಲ್ಲ. ಸರ್ಕಾರ ಬೇರೆ ದಾರಿ ಹುಡುಕುತ್ತಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries