HEALTH TIPS

ಸ್ಥಳೀಯರ ದೂರು: ಪೃಥ್ವಿರಾಜ್ ಅಭಿನಯದ ಸಿನಿಮಾದ ಸೆಟ್ ನೆಲಸಮ

                   ಕೊಚ್ಚಿ: ಪೃಥ್ವಿರಾಜ್ ಅಭಿನಯದ 'ಗುರುವಾಯೂರ್ ಅಂಬಲ ನಡೆಯಿಲ್' ಚಿತ್ರದ ಚಿತ್ರೀಕರಣಕ್ಕಾಗಿ ಪೆರುಂಬಾವೂರಿನಲ್ಲಿ ನಿರ್ಮಿಸಲಾಗಿದ್ದ ಸೆಟ್ ಅನ್ನು ನಗರಸಭೆಯ ನಿರ್ದೇಶನದ ಮೇರೆಗೆ ಕೆಡವಲಾಗಿದೆ.

              ಚಿತ್ರೀಕರಣಕ್ಕಾಗಿ ಗುರುವಾಯೂರ್ ದೇವಾಲಯ ಮತ್ತು ಆಡಿಟೋರಿಯಂ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ. ಈ ಮಾದರಿಗಳನ್ನು ನಗರಸಭೆಯ ನಿರ್ದೇಶಾನುಸಾರ  ಕೆಡವಬೇಕಾಯಿತು. ಜನನಿಬಿಡ ಜಾಗದಲ್ಲಿ ಅನುಮತಿ ಇಲ್ಲದೇ ಕಾಮಗಾರಿ ನಡೆಸಿದ್ದಕ್ಕಾಗಿ ನಗರಸಭೆ ಕ್ರಮ ಕೈಗೊಂಡಿದೆ. ಸುಮಾರು 60 ಜನರು ಇಂದು ತಿಂಗಳಿಂದ ಕೆಲಸ ಮಾಡುತ್ತಿದ್ದರು.

               ಸಿನಿಮಾದ ಚಿತ್ರೀಕರಣಕ್ಕಾಗಿ ಪೆರುಂಬಾವೂರು ಕಾರಾಟ್‍ನ ಪಳ್ಳಿಕ್ಕರ ಎಂಬಲ್ಲಿನ 12ನೇ ವಾರ್ಡ್‍ನಲ್ಲಿರುವ ಖಾಸಗಿ ವ್ಯಕ್ತಿಯೊಬ್ಬರ ಜಾಗದಲ್ಲಿ ಸಿನಿಮಾ ಸೆಟ್‍ನ ಕೆಲಸ ನಡೆಯುತ್ತಿತ್ತು. ಆನನಿಬಿಡ ಸ್ಥಳದಲ್ಲಿ ಸೆಟ್ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸ್ಥಳೀಯರು ನಗರಸಭೆಗೆ ದೂರು ಸಲ್ಲಿಸಿದ್ದರು. ನಂತರ ನಗರಸಭೆ ಪರಿಶೀಲನೆ ನಡೆಸಿ ಸೆಟ್ ನಿರ್ಮಾಣ ಸ್ಥಗಿತಗೊಳಿಸಿತ್ತು. ಇದರಿಂದ ಸೆಟ್ ಕೆಡವಲು ಪಾಲಿಕೆ ಮೆಮೊ ನೀಡಿತ್ತು.

                 ನಗರಸಭೆ ಅಧ್ಯಕ್ಷ ಬಿಜುಜಾನ್ ಜೇಕಬ್ ಮಾತನಾಡಿ, ಸೆಟ್ ನಿರ್ಮಿಸಿದ ಜಾಗ ಇನ್ನೂ ಭೂಮಿಯೇ ಆಗಿದ್ದು, ನಿರ್ಮಾಣಕ್ಕೆ ಮಾಲೀಕರು ಯಾವುದೇ ರೀತಿಯ ಅನುಮತಿ ಪಡೆದಿಲ್ಲ. ಪೃಥ್ವಿರಾಜ್ ಪೆÇ್ರಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಪೃಥ್ವಿರಾಜ್ ಮತ್ತು ಬಾಸಿಲ್ ಜೋಸೆಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ವಿಪಿನ್ ದಾಸ್ ನಿರ್ದೇಶಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries