ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ವರ್ಷಾವಧಿ ಷಷ್ಠಿ ಮಹೋತ್ಸವ ಡಿ. 18 ಮತ್ತು 19 ರಂದು ಕ್ಷೇತ್ರ ತಂತ್ರಿಗಳಾದ ಅರವತ್ ಪದ್ಮನಾಭ ತಂತ್ರಿಗಳ ಕಾರ್ಮಿಕತ್ವದಲ್ಲಿ ಜರಗಲಿದೆ.
ಡಿ18 ರಂದು ಸೋಮವಾರ ಬೆಳಗ್ಗೆ ಅಭಿಷೇಕ ಪೂಜೆ, ಉಷಃಪೂಜೆ, ಗಣಹೋಮ, ನವಕಾಭಿಷೇಕ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ ಪೂಜೆ, ಪ್ರಸಾದ ಭೋಜನ ನಡೆಯಲಿದೆ. ಸಂಜೆ 06 ರಿಂದ ತಾಯಂಬಕ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ನಡೆಯಲಿದೆ. 06.30 ಮೂಡುಮನೆ ಬಳ್ಳುಳ್ಳಾಯ ತರವಾಡು ಮನೆಯಿಂದ ಭಂಡಾರ ಆಗಮನ, ರಾತ್ರಿ 07ಕ್ಕೆ ಮಹಾಪೂಜೆ , ಶ್ರೀ ಭೂತಬಲಿ, .ಕೋಟೂರು ಕಟ್ಟೆ ಸವಾರಿ, 09.ಕ್ಕೆ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮಲ್ಲ ಇವರಿಂದ ಯಕ್ಷಗಾನ ಬಯಲಾಟ, ರಾತ್ರೆ 10.30 ಕ್ಕೆ ಶ್ರೀ ದೇವರ ಕೋಟೂರು ಕಟ್ಟೆ ಸವಾರಿ ಹಿಂತಿರುಗುವುದು, ಕಟ್ಟೆ ಪೂಜೆ, ರಾಜಾಂಗಣದಲ್ಲಿ ನೃತ್ಯ ಸೇವೆ ನಡೆಯಲಿದೆ.
19ರಂದು ಮಂಗಳವಾರ ಬೆಳಗ್ಗೆ 10.ಕ್ಕೆ ರಾಜಾಂಗಣದಲ್ಲಿ ದರ್ಶನಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಪೂಜೆ, ಮಂತ್ರಾಕ್ಷತೆ, ಪ್ರಸಾದ ಭೋಜನ, ಮಧ್ಯಾಹ್ನ 1.ರಿಂದ ಶ್ರೀ ವಿಷ್ಣುಮುರ್ತಿ ದೈವದ ಕೋಲ, ಸಂಜೆ 06.30 ಕ್ಕೆ ದೀಪಾರಾಧನೆ, ರಾತ್ರಿ 07ಕ್ಕೆ ಶ್ರೀರಂಗಪೂಜೆ ನಡೆಯಲಿದೆ.