HEALTH TIPS

ಪ್ರಪಂಚಕ್ಕೆ ಜ್ಞಾನದ ಪಾಠ ಮಾಡಿದ ವಿಶ್ವವಿದ್ಯಾಲಯಗಳ ಸುಂದರ ಚರಿತ್ರೆ ಭಾರತಕ್ಕಿದೆ – ಡಾ.ರತ್ನಾಕರ ಮಲ್ಲಮೂಲೆ: ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಸಂಘದ 49ನೇ ವಾರ್ಷಿಕೋತ್ಸವ, ಧಾರ್ಮಿಕ ಸಭೆ

                    ಬದಿಯಡ್ಕ: ಆರ್ಷೇಯ ಧರ್ಮದ ತಾತ್ವಿಕ ನಿಲುವುಗಳು ಮನುಷ್ಯತ್ವ ಮತ್ತು ಪ್ರಕೃತಿಗೆ ಹೆಚ್ಚು ಒತ್ತು ಕೊಟ್ಟಿದ್ದುವು. ದೇವರ ಪರಿಕಲ್ಪನೆ ಹಾಗೂ ಅದಕ್ಕೆ ಪೂರಕವಾದ ಆರಾಧನೆ ಭಯ ಭಕ್ತಿಗಳು ಮನುಷ್ಯನ ಕೌಟುಂಬಿಕ ಹಾಗೂ ಸಾಮಾಜಿಕ ಬದುಕಿನ ಸುಸ್ಥಿತಿಗೂ ಸುಂದರವಾದ ಚೌಕಟ್ಟಿಗೂ ಕಾರಣವಾಗುತ್ತಿತ್ತು. ಪ್ರಪಂಚಕ್ಕೆ ಜ್ಞಾನದ ಪಾಠ ಮಾಡಿದ ವಿಶ್ವವಿದ್ಯಾಲಯಗಳ ಸುಂದರ ಚರಿತ್ರೆ ಭಾರತಕ್ಕಿದೆ. ವೇದ ಕಾಲದಲ್ಲಿ ಇದ್ದ ಕೌಶಲ್ಯಾಧಾರಿತ ಬದುಕಿನ ನಡೆ ಮತ್ತು ಹಲವು ಧನಾತ್ಮಕ ವಿಷಯಗಳು ಇಂದಿಗೂ ಪ್ರಸ್ತುತ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಅಭಿಪ್ರಾಯಪಟ್ಟರು.

             ಸೋಮವಾರ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಸಂಘದ 49ನೇ ವಾರ್ಷಿಕೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

           ಕಳೆದುಹೋದುದೆಲ್ಲ ಮೌಢ್ಯಗಳಲ್ಲ. ಭಯ, ಭಕ್ತಿ ಆರಾಧನೆಗಳು ವ್ಯಕ್ತಿಯ ಹಾಗೂ ವ್ಯಷ್ಟಿಯ ಒಳಿತಿಗೆ ಕಾರಣವಾಗುವುದಿದೆ. ಅಲ್ಲಿ ಜೀವನಾನುಭವಗಳಿವೆ. ಆದ ಕಾರಣ ಧನಾತ್ಮಕವಾದ ನಂಬಿಕೆ, ಆಚರಣೆ, ಭಯ, ಭಕ್ತಿಗಳು ಮುಂದುವರಿಯಬೇಕು. ಆದರೆ ಭಕ್ತಿಭಾವದಲ್ಲಿ ಆಡಂಬರ, ಶೋಕಿತನಗಳು ಇಲ್ಲವಾಗಬೇಕು. ವೇದದಲ್ಲಿ ಉಲ್ಲೇಖಿಸಿರುವಂತೆ ಅಧ್ಯುದಯ ಎಂಬುದು ವ್ಯಕ್ತಿಯೊಳಗೆ ಮಾತ್ರ ಉಳಿಯದೆ ಅದು ಸಮಷ್ಟಿಯಲ್ಲಿ ಕೇಂದ್ರೀಕೃತವಾಗಬೇಕು. ಇಂತಹ ಧರ್ಮಬೋಧೆ ಹೊಸತಲೆಮಾರಿಗೆ ಸಿಗಲು ದೇವಸ್ಥಾನ, ದೈವಸ್ಥಾನ, ಭಜನಾಮಂದಿರಗಳು ಕಾರಣವಾಗಬೇಕು ಎಂದರು.

              ಶ್ರೀ ಕುಮಾರಸ್ವಾಮಿ ಭಜನಾ ಸಂಘದ ಅಧ್ಯಕ್ಷ ಪಿ. ನಾರಾಯಣ ಶೆಟ್ಟಿ ಅಧ್ಯಕ್ಷತೆ  ವಹಿಸಿದ್ದರು. ಮಹಾಜನ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಜಯದೇವ ಖಂಡಿಗೆ, ನೀರ್ಚಾಲು ಶ್ರೀ ಧÀರ್ಮಶಾಸ್ತಾ ಸೇವಾಸಮಿತಿಯ ಅಧ್ಯಕ್ಷ ಉದಯಕುಮಾರ್ ನೀರ್ಚಾಲು, ಶ್ರೀ ಕುಮಾರಸ್ವಾಮಿ ಭಜನಾ ಸಂಘದ ಗುರುಸ್ವಾಮಿ ಸುಬ್ರಹ್ಮಣ್ಯ ಆಚಾರ್ಯ, ಶಿವಾಜಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ವಿಜೇಶ್ ಕುಮಾರ್ ವಿ.ಯಂ. ನಗರ ಬೇಳ, ಶ್ರೀ ಕುಮಾರಸ್ವಾಮಿ ಮಹಿಳಾ ಭಜನಾ ಸಂಘದ ಅಧ್ಯಕ್ಷೆ ಪದ್ಮಾವತಿ ಗಂಗಾಧರ ಪೂವಾಳೆ ಮಲ್ಲಡ್ಕ ಉಪಸ್ಥಿತರಿದ್ದರು. ಸಂಘದ ಹಿರಿಯ ಸದಸ್ಯ ದೇವದಾಸ ಆಚಾರ್ಯ ನೀರ್ಚಾಲು ಇವರಿಗೆ ಗೌರವಾರ್ಪಣೆ ನಡೆಯಿತು. ಕೃಷ್ಣನಾಯ್ಕ ಮಲ್ಲಡ್ಕ, ಬಾಲಕೃಷ್ಣ ಆಚಾರ್ಯ ನೀರ್ಚಾಲು ಬಹುಮಾನ ವಿತರಿಸಿದರು. ಜೊತೆ ಕಾರ್ಯದರ್ಶಿ ಗಣೇಶ್ ಕೆ.ನೀರ್ಚಾಲು ಪ್ರಾರ್ಥನೆ ಹಾಡಿದರು. ಸಂಘದ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ ಸ್ವಾಗತಿಸಿ, ಕೋಶಾಧಿಕಾರಿ ಸುರೇಶ್ ನಾಯ್ಕ ಒ.ಎನ್. ಲೆಕ್ಕಪತ್ರಮಂಡಿಸಿದರು. 

               ಬೆಳಗ್ಗೆ ಗಣಪತಿ ಹೋಮ, ಧ್ವಜಾರೋಹಣ, ವೇದಮೂರ್ತಿ ಕಿಳಿಂಗಾರು ಶಿವಶಂಕರ ಭಟ್ಟರಿಂದ ಆಶ್ಲೇಷ ಪೂಜೆ, ಶ್ರೀ ಕುಮಾರಸ್ವಾಮಿ ಮಹಿಳಾ ಭಜನಾ ಸಂಘದವರಿಂದ ಭಜನೆ, ಶ್ರೀ ಧÀರ್ಮಶಾಸ್ತಾ ಮಹಿಳಾ ಭಜನಾ ಸಂಘದವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಅಪರಾಹ್ನ ಶ್ರೀ ಕುಮಾರಸ್ವಾಮಿ ಮಹಿಳಾ ಸಂಘದವರಿಂದ ತಿರುವಾದಿರ ನಡೆಯಿತು. ರಾತ್ರಿ ಶಿವಾಜಿ ಫ್ರೆಂಡ್ಸ್ ನೀರ್ಚಾಲು ಪ್ರಾಯೋಜಕತ್ವದಲ್ಲಿ ಹನುಮಗಿರಿ ಶ್ರೀ ಕೋದಂಡರಾಮ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀಕೃಷ್ಣ ಪಾರಿಜಾತ, ನರಕಾಸುರ ವಧೆ, ಮೈಂದ ದ್ವಿವಿದ ಕಾಳಗ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries