HEALTH TIPS

ಇಂದು ದೇವಕಾನ ಸಂಸ್ಮರಣೆ

                    ಉಪ್ಪಳ: ಬೆನಕ ಯಕ್ಷಕಲಾ ವೇದಿಕೆ ಪೈವಳಿಕೆ ಇದರ ನೇತೃತ್ವದಲ್ಲಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕøತಿಕ ಪ್ರತಿಷ್ಠಾನ ಉಜಿರೆ ಸಹಯೋಗದೊಂದಿಗೆ ರಜತಪರ್ವ ಸರಣಿ ತಾಳಮದ್ದಳೆಯ ಭಾಗವಾಗಿ ಖ್ಯಾತ ಯಕ್ಷಗಾನ ಪ್ರಸಾದನ ಕಲಾವಿದ, ವೇಶಧಾರಿ ದಿ.ದೇವಕಾನ ಕೃಷ್ಣ ಭಟ್ ಸಂಸ್ಮರಣಾ ಕಾರ್ಯಕ್ರಮ ಇಂದು(ಸೋಮವಾರ) ಅಪರಾಹ್ನ 4 ರಿಂದ 7 ರವರೆಗೆ ಪೈವಳಿಕೆ ಸಮೀಪದ ಬಾಯಿಕಟ್ಟೆ ಶ್ರೀಅಯ್ಯಪ್ಪ ಭಜನಾ ಮಂದಿರದ ಪರಿಸರದಲ್ಲಿ ನಡೆಯಲಿದೆ.

         ಈ ಸಂದರ್ಭ ಮೋಕ್ಷ ಸಂಗ್ರಾಮ ಆಖ್ಯಾಯಿಕೆಯ ತಾಳಮದ್ದಳೆ ಪ್ರಸ್ತುತಿಗೊಳ್ಳಲಿದ್ದು, ಹಿಮ್ಮೇಳದಲ್ಲಿ ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ, ನಿಡುವಜೆ ಶಂಕರ ಭಟ್, ರಾಮಮೂರ್ತಿ ಕುದ್ರೆಕೋಡ್ಳು ಪ್ರಸಂಗ ನಿರ್ವಹಿಸುವರು. ಮುಮ್ಮೇಳದಲ್ಲಿ ಡಾ.ಎಂ.ಪ್ರಭಾಕರ ಜೋಶಿ, ಪೂಕಳ ಲಕ್ಷ್ಮೀನಾರಾಯಣ ಭಟ್, ಉಜಿರೆ ಅಶೋಕ ಭಟ್, ಶ್ರೀಕೃಷ್ಣ ದೇವಕಾನ ಪಾತ್ರನಿರ್ವಹಣೆ ಮಾಡುವರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries