HEALTH TIPS

ಕರ್ತವ್ಯ ನಿಭಾಯಿಸದ ರಾಜ್ಯಪಾಲರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌

             ಕೊಚ್ಚಿ: ಕೇರಳದಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ವಾಕ್ಸಮರ ಮುಂದುವರಿದಿದೆ. 'ರಾಜ್ಯಪಾಲ ಅರೀಫ್‌ ಮೊಹಮ್ಮದ್‌ ಖಾನ್ ಅವರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿಲ್ಲ' ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆರೋಪಿಸಿದ್ದಾರೆ.

            'ರಾಜ್ಯಪಾಲರು ಸಂಘ ಪರಿವಾರದ ಬೆಂಬಲಿಗರಾಗಿದ್ದರೆ ತಮಗೇನೂ ಸಮಸ್ಯೆ ಇಲ್ಲ.

ಆದರೆ, ರಾಜ್ಯಪಾಲರು ರಾಜ್ಯಪಾಲರಂತೆಯೇ ಕಾರ್ಯನಿರ್ವಹಿಸಬೇಕು. ಈಗ ರಾಜ್ಯಪಾಲರಂತೆ ಕಾರ್ಯನಿರ್ವಹಿಸುತ್ತಿಲ್ಲ. ರಾಜ್ಯಪಾಲರು ತಮಗೆ (ಮುಖ್ಯಮಂತ್ರಿ) ಏನಾದರೂ ಹೇಳುವುದಿದ್ದರೆ ನೇರವಾಗಿ ತಿಳಿಸಲಿ. ಮಾಧ್ಯಮಗಳ ಮೂಲಕವಲ್ಲ' ಎಂದು ಅಭಿಪ್ರಾಯಪಟ್ಟರು.

              ಬುಧವಾರ ಸುದ್ದಿಗಾರರ ಜತೆ ಮಾತನಾಡಿದ್ದ ರಾಜ್ಯಪಾಲರು, 'ಸರ್ಕಾರದ ಸಲಹೆಗಳಿಗೆ ನಾನು ಮುಕ್ತವಾಗಿದ್ದೇನೆ. ಆದರೆ, ನನ್ನ ಮೇಲೆ ಒತ್ತಡವನ್ನು ಹೇರಲಾಗದು' ಎಂದು ಹೇಳಿದ್ದರು. ವಿವಿಧ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕ ಕುರಿತು ಈ ಮಾತು ಆಡಿದ್ದರು.

            ಮಸೂದೆ ಅಥವಾ ಸುಗ್ರೀವಾಜ್ಞೆ ಕುರಿತಂತೆ ತುರ್ತು ಕ್ರಮ ಅಗತ್ಯ ಎಂದು ಸರ್ಕಾರ ಭಾವಿಸಿದ್ದರೆ, ರಾಜಭವನಕ್ಕೆ ಬಂದು ತಿಳಿಸಬೇಕು ಎಂದು ರಾಜ್ಯಪಾಲರು ಹೇಳಿದ್ದರು. ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕ ವಿಷಯ ಸರ್ಕಾರ -ರಾಜ್ಯಪಾಲರ ನಡುವೆ ಸಂಘರ್ಷ ನಡೆದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries