ಕುಂಬಳೆ: ಬಿಜೆಪಿ ಕುಂಬಳೆ ಮಂಡಲ ಕಾರ್ಯಾಲಯದಲ್ಲಿ ಮಾಜಿ ಪ್ರದಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಯವರ 99 ನೇ ವರ್ಷದ ಪುಣ್ಯ ಸ್ಮರಣೆ ಸೋಮವಾರ ನಡೆಯಿತು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕೆ ಸತೀಶ್ಚಂದ್ರ ಭಂಡಾರಿ ಕೋಳಾರು ಪುಷ್ಪಾರ್ಚನೆ ಮಾಡಿದರು ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ.ರವಿಂದ್ರನ್ ಅವರು ಅಟಲ್ ಬಿಹಾರಿ ವಾಜಪೇಯಿಯವರ ಜೀವನ-ಸಾಧನೆಗಳ ಬಗ್ಗೆ ವಿವರಿಸಿದರು ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಕುಮಾರ್ ಮಾತನಾಡಿದರು
ಜಿಲ್ಲಾ ಸಮಿತಿ ಸದಸ್ಯರಾದ ಮುರಳೀಧರ ಯದವ್ ನಾಯ್ಕಾಪು, ಉದ್ಯಮಿ ವಿಕ್ರಮ್ ಪೈ, ಗೋಪಾಲಕೃಷ್ಣ ಪೂಜಾರಿ ಕಂಚಿಕಟ್ಟೆ, ಪುತ್ತಿಗೆ ಪಂಚಾಯತಿ ಸದಸ್ಯ ಜನಾರ್ಧನ ಕಣ್ಣೂರು, ಎ.ಬಿ.ವಿ. ಪಿ ಪ್ರಮುಖರು ಮೊದಲಾದವರು ಉಪಸ್ಥಿತರಿದ್ದರು ಬಿಜೆಪಿ ಪಂಚಾಯತಿ ಸಮಿತಿ ಅದ್ಯಕ್ಷ ಸುಜಿತ್ ರೈ ಸ್ವಾಗತಿಸಿ, ಪಂಚಾಯತಿ ಸದಸ್ಯ ವಿವೇಕಾನಂದ ಶೆಟ್ಟಿ ವಂದಿಸಿದರು.

.jpg)
